ಛತ್ತೀಸ್ಗಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ತಾಯಿ-ಮಕ್ಕಳ ದಾರುಣ ಸಾವು

0
554

ಸನ್ಮಾರ್ಗ ವಾರ್ತೆ

ರಾಯ್‍ಪುರ,ಜೂ.1:ಛತ್ತಿಸ್‍ಗಡದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಮಂದಿ ಮೃತಪಟ್ಟಿದ್ದಾರೆ. ಲತಾಸಾಹು ಎಂಬ ಮಹಿಳೆ, ಅವರ ಏಳು ವರ್ಷ ಮತ್ತು ಮೂರು ವರ್ಷದ ಇಬ್ಬರು ಮಕ್ಕಳು ದಾರುಣ ಮರಣ ಹೊಂದಿದ್ದಾರೆ. ಸರಂಗರ್ ವಿಧಾನಸಭಾ ಕ್ಷೇತ್ರದ ಸರಂಗರ್ ಚಾಂಗಾಯ್ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಪತಿ ಸುಖರಾಮ ಸಾಹು ಘಟನಾ ಸಮಯದಲ್ಲಿ ಹೊರಗಿದ್ದರು. ಆದ್ದರಿಂದ ಅಪಾಯದಿಂದ ಅವರು ಪಾರಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.