ಸನ್ಮಾರ್ಗ ವಾರ್ತೆ
ಮಂಗಳೂರು: ವಿಜಯಪುರದ ಲುಕ್ಮಾನ್ ಯುನಾನಿ ಕಾಲೇಜಿನ ಬಿಯುಎಂಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಮಂಗಳೂರಿನ ಸೈಯದ್ ಅಬ್ದುಲ್ ಜಬ್ಬಾರ್ ಸಾಜಿದ್ ರಾಜ್ಯಮಟ್ಟದಲ್ಲಿ ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಅದೇ ರೀತಿ ಇವರು ಲುಕ್ಮಾನ್ ಯುನಾನಿ ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.
ಇವರು ಮಂಗಳೂರಿನ ಬೋಳಾರದ ನಿವಾಸಿ ಸೈಯದ್ ಹಾಜಿ ಮಲಂಗ್ ಬಾಬಾ ಮತ್ತು ಶಕೀಲಾ ದಂಪತಿಯ ಪುತ್ರ.