ಸನ್ಮಾರ್ಗ ವಾರ್ತೆ
ಮುಂಬೈ: ಪುಣೆಯಲ್ಲಿ ಕುಸ್ತಿಪಟು ಗುಂಡಿಗೆ ಬಲಿಯಾದ ಘಟನೆ ನಡೆದಿದೆ. ಚಕನ್ ಸಮೀಪದ ಶೆಲ್ ಪಿಂಪಲ್ಗಾವ್ ಗ್ರಾಮದಲ್ಲಿ ನಾಗೇಶ್ ಕರೊಲೆ ಎಂಬ ಕುಸ್ತಿಪಟು ಹತ್ಯೆಯಾಗಿದ್ದಾರೆ. ಗುರುವಾರ ರಾತ್ರೆ ಹತ್ತು ಗಂಟೆಗೆ ನಾಲ್ವರು ಸೇರಿ ಕೊಲೆ ಮಾಡಿದ್ದಾರೆ. ಪೂರ್ವ ದ್ವೇಷ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದು ಭೂ ವ್ಯವಹಾರಕ್ಕೆ ಸಂಬಂಧಿಸಿ ಕೊಲೆ ಇದೆಂದು ಶಂಕಿಸಲಾಗುತ್ತಿದೆ. ನಾಗೇಶ್ ಸಭೆಯೊಂದರಿಂದ ಮರಳುತ್ತಿದ್ದಾಗ ನಾಲ್ವರು ನಾಗೇಶ್ ಮೇಲೆ ಗುಂಡು ಹಾರಿಸಿದರು. ಗುಂಡು ತಗಲಿದ ನಾಗೇಶ್ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಜೀವ ಉಳಿಸಲು ಆಗಿಲ್ಲ. ಘಟನೆಯಲ್ಲಿ ಅಜ್ಞಾತ ವ್ಯಕ್ತಿಗಳ ಮೇಲೆ ಕೇಸು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.