ನೀವು ಒಂಟಿಯಲ್ಲ: ಶ್ರುತಿಯನ್ನು ಸಂತೈಸಿದ ರಾಹುಲ್ ಗಾಂಧಿ

0
235

ಸನ್ಮಾರ್ಗ ವಾರ್ತೆ

ಮೇಪ್ಪಡಿ, (ಕೇರಳ) ಆ. 12: ವಯನಾಡಿನ ದುರಂತದಲ್ಲಿ ತಂದೆ ತಾಯಿ, ಸಹೋದರಿಯನ್ನು ಕಳೆದುಕೊಂಡ ಶ್ರುತಿಯನ್ನು ರಾಹುಲ್ ಗಾಂಧಿ ಸಂತೈಸಿದ್ದಾರೆ.

ಶ್ರುತಿಯ ಕುಟುಂಬದ ಒಂಬತ್ತು ಮಂದಿ ಭೂಕುಸಿತದಿಂದ ಜೀವ ಕಳಕೊಂಡಿದ್ದರು. ನಂತರ ಅವಳ ಭಾವಿ ವರ ಜೆನ್ಸನ್ ಆಧಾರವಾಗಿದ್ದರು. ಮಂಗಳವಾರ ಕೋಝಿಕ್ಕೋಡ್, ಕೊಲ್ಲಗಾಲ ರಾಷ್ಟ್ರೀಯ ಹೆದ್ದಾರಿಯ ಸಮೀಪ ಖಾಸಗಿ ಬಸ್ ಮತ್ತು ವ್ಯಾನ್ ಢಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡ ಜೆನ್ಸನ್ ಕೂಡ ಬುಧವಾರ ಮೃತ ಪಟ್ಟಿದ್ದು ಶ್ರುತಿ ಪೂರ್ಣ ತಬ್ಬಲಿಯಂತಾದರು.

ಪ್ರತಿಪಕ್ಷ ನಾಯಕ ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ಶ್ರುತಿಯವರಿಗೆ ಭರವಸೆ ಮಾತುಗಳನ್ನು ಎಕ್ಸ್‌ ನಲ್ಲಿ ಪೋಸ್ಟ್ ಹಾಕಿ ಸಂತೈಸಿದ್ದಾರೆ. ನಾನು ಮೇಪ್ಪಡಿ ಶಿಬಿರಕ್ಕೆ ಹೋದಾಗ ಶ್ರುತಿ ತಮ್ಮವರನ್ನು ಕಳಕೊಂಡು ದುಃಖವನ್ನು ಸಹಿಸುತ್ತಿದ್ದುದು ನೋಡಿದೆ. ಅವಳ ಸಹನಾ ಶಕ್ತಿ ಅಪಾರವಾಗಿದೆ. ನಾಶ ತಂದ ದುರಂತದಲ್ಲಿ ಜೈನ್ಸನ್ ಧೈರ್ಯ ತುಂಬಿದ್ದ. ಇಂದು ಅವನು ಕೂಡ ಇಹಲೋಕ ತ್ಯಜಿಸಿದ್ದಾನೆ. ಈ ಸಂದರ್ಭದಲ್ಲಿ ನೀನು ಒಂಟಿಯಲ್ಲ ಎಂಬುದನ್ನು ಅರಿತುಕೊ, ಅದೇ ದೃಢವಾದ ಸಹನೆಯೊಂದಿಗೆ ಮುಂದೆ ಸಾಗು. ಎಂದು ರಾಹುಲ್ ಗಾಂಧಿ ಪೋಸ್ಟ್ ಹಾಕಿದ್ದಾರೆ.