ಮಂಡ್ಯ: ಸಂತ್ರಸ್ತ ಕುಟುಂಬಗಳ ಮನೆಗೆ ಜಮಾಅತೆ ಇಸ್ಲಾಮಿ ಹಿಂದ್ ನಿಯೋಗ ಭೇಟಿ

0
1208

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿಯ ನಗರ್ ವಿ ಸಿ ನಾಲೆಯಲ್ಲಿ ಸಂಭವಿಸಿದ ಬಸ್ಸು  ದುರಂತದಲ್ಲಿ ಮೃತಪಟ್ಟ 8 ಕುಟುಂಬಗಳ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸಂಚಾಲಕರಾದ ಮೌಲಾನಾ ಅಝರುಲ್ಲಾ ಖಾಸ್ಮಿ ನೇತೃತ್ವದ ನಿಯೋಗ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ನೀಡಿ ಮತ್ತು ಮೂಢನಂಬಿಕೆಗಳಿಂದ ಹೆದರಿದ ಕುಟುಂಬಗಳಿಗೆ ಮತ್ತು ಗ್ರಾಮಸ್ಥರಿಗೆ ಧೈರ್ಯ ನೀಡಲಾಯಿತು. ಮುಂದೆ ಕುಟುಂಬಗಳ ಸರ್ವೆ ನಡೆಸಿ ಅರ್ಹ ಕುಟುಂಬಕ್ಕೆ ಸಹಾಯ ನೀಡಲಾಗುವುದು ಎಂದು  ಮೌಲಾನಾ ಅಝರುಲ್ಲಾ ಖಾಸ್ಮಿ ತಿಳಿಸಿದರು. ನಿಯೋಗದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಂಡ್ಯ ಸ್ಥಾನೀಯ ಅಧ್ಯಕ್ಷರಾದ ತನ್ವೀರ್ ಅಹಮದ್ ಹಾಗೂ ಕಾರ್ಯಕರ್ತರು ನಿಯೋಗದಲ್ಲಿದ್ದರು.