ಅಡ್ವಾಣಿಯವರ ಸೀಟಿನಲ್ಲಿ ಸ್ಪರ್ಧಿಸಲು ಸಾಧ್ಯವಾಗಿದ್ದು ತನ್ನ ಅದೃಷ್ಟ- ಅಮಿತ್ ಶಾ

0
1591

ಗಾಂಧಿ ನಗರ, ಮಾ.20: ಹಿರಿಯ ಬಿಜೆಪಿ ನಾಯಕ ಎಲ್‍ಕೆ ಅಡ್ವಾಣಿಯವರ ಸೀಟಿನಲ್ಲಿ ಸ್ಪರ್ಧಿಸಲು ಸಾಧ್ಯವಾಗಿದ್ದು ತನ್ನ ಭಾಗ್ಯವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ದೇಶದಲ್ಲಿ ಯಾರ ಆಳ್ವಿಕೆಯು ಇರಬೇಕೆನ್ನುವುದಕ್ಕೆ ಆದ್ಯತೆ ನೀಡಿ ಈ ಚುನಾವಣೆ ನಡೆಯುತ್ತಿದೆ. ಇದಕ್ಕೆ ಉತ್ತರವಾಗಿ ದೇಶದುದ್ದಕ್ಕೂ ಮೋದಿ ಎಂಬ ಹೆಸರನ್ನು ಮಾತ್ರ ತಾನು ಕೇಳಿಸಿಕೊಂಡಿದ್ದೇನೆ ಎಂದು ಅಮಿತ್ ಶಾ ಹೇಳಿದರು.

ಗುಜರಾತಿನ ಗಾಂಧಿನಗರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು. ಬೃಹತ್ ರ್ಯಾಲಿಯೊಂದಿಗೆ ಬಂದು ಅಮಿತ್‍ ಶಾ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರ ಜೊತೆಗಿದ್ದರು.