ಸುಮಲತಾಗೆ ಮೈಸೂರು-ಕೊಡಗು: ಭರವಸೆ ನೀಡಿದ ಜೆಡಿಎಸ್

0
1030

ಬೆಂಗಳೂರು: ನಟ ಅಂಬರೀಶ್ ಪತ್ನಿ ಮಂಡ್ಯ ಲೋಕಸಭಾಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹೊರಗುಳಿದರೆ ವಿಜಯಸಾಧ್ಯತೆಯಿರುವ ಮೈಸೂರು-ಕೊಡಗು ಕ್ಷೇತ್ರವನ್ನು ಬಿಟ್ಟುಕೊಡಲು ಸಜ್ಜಾಗಿದ್ದಾರೆ. ಈ ಕುರಿತು ಸುಮಲತಾರೊಂದಿಗೆ ಪಾರ್ಟಿ ಅಧ್ಯಕ್ಷ ಎಚ್‍ಡಿ ದೇವೆಗೌಡ, ಪುತ್ರ ಹಾಗೂ ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ ಬೆಂಗಳೂರಿನ ಹೊಟೇಲಿನಲ್ಲಿ ಸಮಾಲೋಚನೆ ನಡೆಸಿದರೂ ಸುಮಲತಾ ಅನುಕೂಲಕರವಾಗಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.

ಕಾಂಗ್ರೆಸ್, ಜೆಡಿಎಸ್ ಸೀಟು ಹಂಚಿಕೆ ತೀರ್ಮಾನವಾಗಿಲ್ಲದಿದ್ದರೂ ಮೈಸೂರು-ಕೊಡಗು, ಮಂಡ್ಯ ಹಾಸನ ಸಹಿತ ಹತ್ತರಷ್ಟು ಸೀಟುಗಳು ದಳ ಕೇಳುತ್ತಿದೆ. ಕುಮಾರಸ್ವಾಮಿಯ ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶಕ್ಕೆ ಸುರಕ್ಷಿತ ಕ್ಷೇತ್ರವನ್ನು ದೇವೆಗೌಡ ಗುರಿಯಿಟ್ಟಿದ್ದು, ನಿಖಿಲ್ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ತಮ್ಮ ಗೌರವದ ಸೀಟು ಮಂಡ್ಯದಲ್ಲಿ ಬಿಜೆಪಿ ಅಂತಹ ವಿರೋಧಿಯಲ್ಲ. ಆದರೆ ಸುಮಲತಾ ಸ್ಪರ್ಧಿಸಿದಿರುವಂತೆ ಮಾಡಲು ಜೆಡಿಎಸ್ ಪ್ರಯತ್ನಿಸುತ್ತಿದೆ. ಸ್ಪರ್ಧಿಸುವುದಿದ್ದರೆ ಮಂಡ್ಯದಿಂದ ಮಾತ್ರವೆಂದು ಹಲವು ಬಾರಿ ಸುಮಲತಾ ಹೇಳಿದ್ದರು. ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಇದು ಜೆಡಿಎಸ್‍ನಲ್ಲಿ ಆತಂಕ ಸೃಷ್ಟಿಸಿದೆ.