ಸನ್ಮಾರ್ಗ ವಾರ್ತೆ
ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸಾರ್ವಜನಿಕ ವಲಯದ ಉದ್ಯಮವಾದ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ನಕಲಿ ಕಾರ್ಖಾನೆಯೊಂದು ಹೈದರಾಬಾದ್ನ ಮಲಕೇತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಕಾರ್ಖಾನೆಯ ಗೋದಾಮಿನಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಇರಿಸದ್ದ 2 ಕೋಟಿ ರೂಪಾಯಿ ಮೌಲ್ಯದ ಸಾಬೂನು ತುಂಬಿದ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಲಕೇತ ಪೊಲೀಸರು ಕಾರ್ಖಾನೆಯ ನಿರ್ವಾಹಕರಾದ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಅವರನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ 150 ಗ್ರಾಂ ತೂಕದ 1800 ಸಾಬೂನುಗಳಿರುವ 20 ಬಾಕ್ಸ್ಗಳು, 75 ಗ್ರಾಂ ತೂಕದ 9400 ಸಾಬೂನುಗಳಿರುವ 47 ಬಾಕ್ಸ್ಗಳು ಮತ್ತು ಈ ವಸ್ತುಗಳನ್ನು ಹೊಂದಿರುವ 400 ಬಾಕ್ಸ್ಗಳು ಸೇರಿವೆ.
ಪ್ಯಾಕ್ಟರಿ ಮಾಲಕ ರಾಕೇಶ್ ಜೈನ್ ,ಮಹಾವೀರ ಜೈನ್ರನ್ನು ಮಲಕ್ ಪೇಟೆ ಪೊಲೀಸರು ಬಂಧಿಸಿದ್ದು 150 ಗ್ರಾಂ ತೂಕದ 1800 ಸೋಪುಗಳ 20 ಪೆಟ್ಟಿಗೆಗಳು, 75 ಗ್ರಾಂನ 9400 ಸೋಪುಗಳ ಸಹಿತ 47 ಪೆಟ್ಟಿಗೆಗಳು ಈ ವಿಭಾಗದಲ್ಲಿ 400 ಪೆಟ್ಟಿಗೆಗಳು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಸೋಪ್ ಆಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಕೆಎಸ್ಡಿಎಲ್ ಅಧ್ಯಕ್ಷ ಮತ್ತುಉದ್ಯಮಿ ಸಚಿವ ಎಂಬಿ ಪಾಟೀಲ್ರಿಗೆ ಸಿಕ್ಕಿದ ರಹಸ್ಯ ವರದಿಯ ಆಧಾರದಲ್ಲಿ ಫ್ಯಾಕ್ಟರಿ ಪತ್ತೆ ಹಚ್ಚಲು ಸಹಾಯಕವಾಗಿದೆ.