ಗೋವುಗಳು ಹಿಂದೂ ಅಗಿವೆ; ಆದ್ದರಿಂದ ಮೃತದೇಹ ಹೂಳಬಾರದು- ಉತ್ತರಪ್ರದೇಶದ ಬಿಜೆಪಿ ನಾಯಕ

0
890

ಲಕ್ನೊ, ಜು. 29: ದನಗಳು ಹಿಂದೂಗಳಾಗಿವೆ. ಆದ್ದರಿಂದ ಅದು ಸತ್ತರೆ ಮೃತದೇಹವನ್ನು ಹೂಳಬಾರದು. ಹಿಂದೂ ಸಂಸ್ಕಾರದಂತೆ ಸುಡಬೇಕೆಂದು ಉತ್ತರಪ್ರದೇಶದ ಬಿಜೆಪಿ ನಾಯಕ ರಂಜಿತ್ ಶ್ರೀವಾಸ್ತವ ಹೇಳಿದ್ದಾರೆ. ಮೃತದೇಹ ಹೂಳುವುದು ಮುಸ್ಲಿಮರ ಆಚಾರವಾಗಿದೆ. ಹೀಗೆ ಮಾಡುವುದು ಗೋನಿಂದೆಯಾಗುತ್ತದೆ ಎಂದು ಅವರು ಅಭಿಪ್ರಯ ವ್ಯಕ್ತಪಡಿಸಿದ್ದಾರೆ. ಬಾರಬಂಕಿಯ ಮುನ್ಸಿಪಾಲಿಟಿ ಸಭೆಯಲ್ಲಿ ಬಿಜೆಪಿ ನಾಯಕ ಹೀಗೆ ಹೇಳಿದರು. ದನಗಳಿಗಾಗಿ ವಿದ್ಯುತ್ ಚಿತಾಗಾರ ನಿರ್ಮಿಸಲು ಅವರು ಆಗ್ರಹಿಸಿದ್ದಾರೆ.

ದನಗಳ ಮೃತದೇಹ ಹಿಂದೂ ಆಚಾರದಂತೆ ಬಿಳಿ ಬಟ್ಟೆಯಲ್ಲಿ ಮುಚ್ಚಬೇಕು. ಇದನ್ನು ಜಾರಿಗೆ ತರಲು ತಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಆಗ್ರಹಿಸುತ್ತಿದ್ದೇನೆ ಎಂದು ನಗರಸಭೆ ಅಧ್ಯಕ್ಷರು ಕೂಡ ಆಗಿರುವ ರಂಜಿತ್ ಶ್ರೀವಾಸ್ತವ ಹೇಳಿದರು.