ಈಶ್ವರ ಚಂದ್ರರ ಪ್ರತಿಮೆ ನಿರ್ಮಿಸುವ ಹಣ ಪಶ್ಚಿಮ ಬಂಗಾಳದಲ್ಲಿದೆ- ಪ್ರಧಾನಿಗೆ ತೀಕ್ಷ್ಣ ಉತ್ತರ ನೀಡಿದ ಮಮತಾ ಬ್ಯಾನರ್ಜಿ

0
517

ಕೊಲ್ಕತಾ,ಮೇ 16: ಪ್ರತಿಮೆ ಒಡೆಯುವುದು ಬಿಜೆಪಿಯ ಅಭ್ಯಾಸವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ತ್ರಿಪುರದ ಲಿಲೆನಿನ್, ಗುಜರಾತ್‍ನಲ್ಲಿ ಅಂಬೇಡ್ಕರ್, ಪಶ್ಚಿಮ ಬಂಗಾಳದಲ್ಲಿ ಈಶ್ವರ ಚಂದ್ರ ವಿದ್ಯಾಸಗರ್ ಪ್ರತಿಮೆ ಕೆಡವಿದ್ದು ಅವರು. ಪ್ರತಿಮೆ ಪುಡಿ ಮಾಡುವುದು ಅವರ ಗುಣವಾಗಿದೆ. ವಿದ್ಯಾಸಾಗರ್ ಪ್ರತಿಮೆಗೆ ನಿರ್ಮಿಸುವ ಹಣ ಪಶ್ಚಿಮ ಬಂಗಾಳ ಸರಕಾರದ ಕೈಯಲ್ಲಿದೆ ಎಂದು ಮಮತಾ ಹೇಳಿದರು.

ಆದರೆ, ಇನ್ನೂರು ವರ್ಷ ಹಳೆಯ ಪರಂಪರೆಯನ್ನು ಮರಳಿಸಲು ಬಿಜೆಪಿಗೆ ಸಾಧ್ಯವಿದೆಯೇ?. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಮೆ ಪುಡಿ ಮಾಡಿದ್ದಾರೆ ಎಂದು ಮೋದಿ ಸುಳ್ಳು ಹೇಳುತ್ತಾರೆ. ಧೈರ್ಯವಿದ್ದರೆ ಮೋದಿ ಆರೋಪ ಸಾಬೀತು ಪಡಿಸಲಿ. ಚುನಾವಣೆ ಆಯೋಗ ಬಿಜೆಪಿಯ ಸಹೋದರ ಸಂಸ್ಥೆಯಾಗಿ ಬಿಟ್ಟಿತು. ಬಿಜೆಪಿಗೆ ಸಹಾಯಕವಾಗಿ ಅದು ಕೆಲಸ ಮಾಡುತ್ತಿದೆ. ನಾನು ಸತ್ಯವನ್ನು ಎತ್ತಿ ಹೇಳಲು ಹೆದರುವುದಿಲ್ಲ. ಇದರ ಹೆಸರಿನಲ್ಲಿ ಜೈಲಿಗೆ ಹೋಗಲು ಕೂಡ ಸಿದ್ಧ ಎಂದು ಮಮತಾ ಹೇಳಿದರು.