ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜ.4: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಿಂದೂ ದೇವರನ್ನು ಅಪಮಾನಿಸಿದ್ದಾರೆ ಎಂಬ ದೂರಿನಲ್ಲಿ ಬಂಧಿಸಲಾದ ಸ್ಟಾಂಡ್ಬೈ ಕೊಮೆಡಿಯನ್ ಮುನವ್ವರ್ ಫಾರೂಕಿಯ ಗೆಳೆಯನಿಗೆ ಬಿಜೆಪಿಯವರು ಹಲ್ಲೆ ಮಾಡಿದ್ದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರತಿಭಟಿಸಿದ್ದಾರೆ.
ಬಿಜೆಪಿಯ ನಿರುದ್ಯೋಗಿ ಗೂಂಡಾಗಳ ಕೆಲಸ ಇತರರಿಗೆ ಹಲ್ಲೆ ಮಾಡುವುದು ಎಂದು ಅವರು ಟ್ವೀಟ್ ಮಾಡಿದ್ದು ಬೈಕಿನಲ್ಲಿ ಪೊಲೀಸರ ಜೊತೆ ಹೋಗುತ್ತಿದ್ದ ಗೆಳೆಯನಿಗೆ ಹೊಡೆಯುವ ವೀಡಿಯುವನ್ನು ಟ್ವೀಟ್ನೊಂದಿಗೆ ಪೋಸ್ಟ್ ಮಾಡಿದ್ದಾರೆ.
“ಬಿಜೆಪಿಯ ನಿರುದ್ಯೋಗಿ ಗೂಂಡಗಳು ಕೆಲಸ ಮಾಡುತ್ತಿದ್ದಾರೆ. ಜನರನ್ನು ಬೆದರಿಸುವುದು. ಮಹಿಳೆಯರ ಅತ್ಯಾಚಾರ ಬೆದರಿಕೆ ಹಾಕುವುದು. ನಿರಾಯುಧರಾದ ಜನರಿಗೆ ಹೊಡೆಯುವುದು ಅವರ ಕೆಲಸ. ಅಲ್ಲದೆ ಭಾರತ್ ಮಾತಾ ಕಿ ಜೈ ಕೂಗುತ್ತಾರೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
BJP's unemployed goons at work. Seems the only work they do is to abuse people, give rape threats to women, beat up unarmed people; & yes, shout Bharat Mata ki Jai! https://t.co/FqJVTRJrVp
— Prashant Bhushan (@pbhushan1) January 3, 2021
ಮಧ್ಯಪ್ರದೇಶದ ಇಂದೋರಿನಲ್ಲಿ ಮುನವ್ವರ್ ಫಾರೂಕಿಗೆ ಹಲ್ಲೆ ಮಾಡಲಾಗಿತ್ತು. ಹಿಂದೂ ದೇವರನ್ನು ಮತ್ತು ಅಮಿತ್ ಶಾರನ್ನು ಕಾರ್ಯಕ್ರಮದಲ್ಲಿ ವಿಮರ್ಶಿಸಿದ್ದನ್ನು ಬೆಟ್ಟು ಮಾಡಿ ಹಲ್ಲೆ ಮಾಡಲಾಗಿದೆ. ಹಿಂದೂ ರಕ್ಷಾ ಸಂಘಸ್ತದ ಕಾರ್ಯಕರ್ತರ ನೇತೃತ್ವದಲ್ಲಿ ಹಲ್ಲೆ ಮಾಡಲಾಗಿದೆ. ನಂತರ ಮುನವರ್ ಮತ್ತು ಗೆಳೆಯನನ್ನು ಪೊಲೀಸರು ಬಂಧಿಸಿದ್ದರು. ಫಾರೂಕಿಯ ಗೆಳೆಯ ಸದಕತ್ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎರಡು ದಿವಸ ಮೊದಲು ಕೋರ್ಟಿಗೆ ಹಾಜರು ಪಡಿಸಿದಾಗ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಬೈಕ್ನಲ್ಲಿ ಪೊಲೀಸರ ಜೊತೆ ಇದ್ದ ಆತನಿಗೆ ಒಬ್ಬಾತ ಹೊಡೆದು ನಿಂದಿಸುವುದು ವೀಡಿಯೊದಲ್ಲಿದೆ.