ಸನ್ಮಾರ್ಗ ವಾರ್ತೆ
ಗುವಾಹಟಿ, ಮಾ.12: ವಿವಾದಿತ ಪೌರತ್ವ ಕಾನೂನು ಜಾರಿಗೊಳಿಸುವ ಪ್ರಕಟಣೆ ಹೊರಡಿಸಿದ ಕೇಂದ್ರ ಸರಕಾರವನ್ನು ನಟ ತಮಿಳು ವೆಟ್ಟಿ ಕಳಗಂ ಮುಖ್ಯಸ್ಥ ವಿಜಯ್ ಕಟುವಾಗಿ ಟೀಕಿಸಿದ್ದಾರೆ. ಸಿಎಎ ಜಾರಿಗೊಳಿಸುವುದನ್ನು ಒಪ್ಪಲಾಗದು ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸ್ವಂತ ಪಾರ್ಟಿ ಘೋಷಿಸಿದ ನಂತರ ನಟ ನೀಡಿದ ಪ್ರಪ್ರಥಮ ರಾಜಕೀಯ ಪ್ರತಿಕ್ರಿಯೆ ಇದಾಗಿದೆ. ದೇಶದ ಎಲ್ಲ ಪ್ರಜೆಗಳು ಸೌಹಾರ್ದದಿಂದ ಬದುಕುವ ಒಂದು ವಾತಾವರಣದಲ್ಲಿ ಭಾರತೀಯ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಜಾರಿಗೊಳಿಸುವುದು ಒಪ್ಪಲು ಹೇಗೆ ಸಾಧ್ಯ.
ತಮಿಳ್ನಾಡಿನ ಈ ಕಾನೂನು ಜಾರಿಗೊಳಿಸಬಾರದೆಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು. ತಮಿಳ್ನಾಡಿನಲ್ಲಿ ಕಾನೂನು ಜಾರಿಗೊಳಿಸುವುದಿಲ್ಲ ಎಂದು ನಾಯಕರು ಭರವಸೆ ನೀಡಬೇಕಾಗಿದೆ ಎಂದು ನಟ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.