ಶಶಿ ತರೂರ್, ಕಾರ್ತಿಯಿಂದ ಪಿ.ಚಿದಂಬರಂ ಭೇಟಿ

0
335

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,25: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂರನ್ನು ಸಂಸದ ಶಶಿ ತರೂರ್ ಮತ್ತು ಚಿದಂಬರ ಮಗ ಕಾರ್ತಿ ಭೇಟಿಯಾಗಿದ್ದಾರೆ. ಚಿದಂಬರಂ ಜೈಲು ಪಾಲಾಗಿ 98 ದಿನಗಳಾಗಿವೆ. ಕೇಂದ್ರ ಸರಕಾರ ಚಿದಂಬರಂರೊಂದಿಗೆ ದೊಡ್ಡ ಅನ್ಯಾಯ ವ್ಯಸಗಿದೆ. ಬಿಜೆಪಿ ಸರಕಾರ ಸಂವಿಧಾನಕ್ಕೂ ಗೌರವ ಕೊಡುವುದಿಲ್ಲ ಎಂದು ತರೂರ್ ಟೀಕಿಸಿದರು. ಅಂತಾರಾಷ್ಟ್ರಿಯ ಸಮುದಾಯ ಮುಂದೆ ಸರಕಾರದ ಇಂತಹ ಕ್ರಮಗಳು ಭಾರತವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ ಎಂದು ತರೂರ್ ಆರೋಪಿಸಿದರು.