ಮಂಗಳೂರು: ಕೊರೋನಾ ವಾರಿಯರ್ಸ್ ಡಾ. ಮುಹಮ್ಮದ್ ಶಾ ಆಲಂರಿಗೆ ಸ್ಥಳೀಯರಿಂದ ಗೌರವ; ಪುಷ್ಪವೃಷ್ಠಿ- ವೀಡಿಯೊ

0
890

ಸನ್ಮಾರ್ಗ ವಾರ್ತೆ

ಮಂಗಳೂರು, ಮೇ ಕೊರೋನಾ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಮುಹಮ್ಮದ್ ಶಾ ಆಲಂ ಅವರನ್ನು ಸ್ಥಳೀಯರು ಪುಷ್ಪವನ್ನು ಚೆಲ್ಲಿ ಸ್ವಾಗತಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ.

ಮಂಗಳೂರಿನ ಶಿವ ಭಾಗ್ ನ ದಿವ್ಯ ದೀಪ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ಅವರು ನಗರದ ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ವಿಭಾಗದಲ್ಲಿ ಉಪ ಪ್ರಾಧ್ಯಾಪಕರೂ ಆಗಿದ್ದಾರೆ.

ಇವರು ಕೆಲಸ ಮುಗಿಸಿ ಮನೆಗೆಂದು ತೆರಳುತ್ತಿದ್ದ ವೇಳೆ ಸ್ಥಳೀಯರು ಜಮಾಯಿಸಿ ಅವರ ಮೇಲೆ ಪುಷ್ಪವೃಷ್ಠಿ ಮಾಡಿದರಲ್ಲದೆ, ಅವರ ಸೇವೆಯನ್ನು ಕೊಂಡಾಡಿ ಹೂಗುಚ್ಛವನ್ನು ನೀಡಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.