ದಾಸರಹಳ್ಳಿ ಕೊಳೆಗೇರಿಯಲ್ಲಿ ಆಹಾರ ವಸ್ತುಗಳ ವಿತರಣೆಗೆ ತಡೆ: ಯುವಕರ ಮೇಲೆ ಹಲ್ಲೆ, ವೀಡಿಯೊ

0
1039
  • ಸನ್ಮಾರ್ಗ ವಾರ್ತೆ

ಬೆಂಗಳೂರಿನ ದಾಸಹಳ್ಳಿ ಸ್ಲಮ್ ನಲ್ಲಿ ಅಗತ್ಯ ಆಹಾರ ವಸ್ತುಗಳನ್ನು ವಿತರಿಸುತ್ತಿದ್ದ ಸೈಯದ್ ತಬ್ರೇಜ್ ಮತ್ತು ಕಿರಣ್, ಜುನೈದ್, ರಿಯಾಜ್, ಫೈರೋಜ್, ಮತ್ತು ಅಮ್ಜದ್ ಅವರ ಮೇಲೆ ಗುಂಪು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಕ್ರಿಕೆಟ್ ಬ್ಯಾಟ್ ನಲ್ಲಿ ಈ ಐವರ ಮೇಲೆ ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ. ಹಲ್ಲೆ ನಡೆಯುವಾಗ ಆ ಸ್ಥಳದಲ್ಲಿದ್ದ ಸಂತ್ರಸ್ಥರಲ್ಲೊಬ್ಬನ ತಾಯಿಯ ಪ್ರಕಾರ, ಮುಸ್ಲಿಮರು ಆಹಾರ ವಸ್ತುಗಳಿಗೆ ವಿಷ ಬೆರೆಸುತ್ತಾರೆ. ನೀವು ಆಹಾರ ವಿತರಿಸಬಾರದು, ನೀವಿಲ್ಲಿಂದ ತೊಲಗಿ ಎಂದು ಗುಂಪು ಬೆದರಿಕೆ ಹಾಕಿದೆ.

ಹಲ್ಲೆಗೀಡಾದ ಈ ಐದು ಮಂದಿಯನ್ನು ಶಾಂಪುರ್ ನ ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜ್ ನಲ್ಲಿ ದಾಖಲಿಸಲಾಗಿದೆ. ಗುಂಪು ರೇಷನ್ ವಿತರಿಸಲು ತಡೆಯೊಡ್ದಿದುದನ್ನು ಅನುಸರಿಸಿ ಈ ಐವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.