ಕಾರು ಹರಿದು ರಸ್ತೆ ಬದಿ ಮಲಗಿದ್ದ ಮೂವರು ಮಕ್ಕಳ ಸಾವು: ಊರವರು ಚಾಲಕನನ್ನು ಹೊಡೆದು ಕೊಂದರು

0
1506

ಪಾಟ್ನ, ಜೂ.27: ಅತಿವೇಗದಿಂದ ಕಾರು ಚಲಾಯಿಸಿ ಮೂವರು ಮಕ್ಕಳು ಮೃತಪಟ್ಟಿದ್ದು ನಂತರ ಉದ್ರಿಕ್ತರಾದ ಊರವರು ಚಾಲಕನನ್ನು ಹೊಡೆದು ಕೊಲೆ ಮಾಡಿದ್ದಾರೆ. ಪಾಟ್ನದ ಕುಮ್ರಾರ್ ನಲ್ಲಿ ಘಟನೆ ನಡೆದಿದ್ದು ಕಾರು ಚಾಲಕ ಸೌರವ್ ಗಂಗೂಲಿ ಹತ್ಯೆಯಾದ ಚಾಲಕನಾಗಿದ್ದಾನೆ. ಈತನೊಂದಿಗೆ ಕಾರಿನಲ್ಲಿದ್ದ ಇನ್ನೊಬ್ಬನಿಗೂ ಜನರು ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ಗುರುವಾರ ಬೆಳಗ್ಗೆ ಸಖಿಯುಲ್ ಹಕ್ ಜೋಪಡಾ ಪಟ್ಟಿಯ ಸಮೀಪ ರಸ್ತೆ ಬದಿ ಮಲಗಿದ್ದ ಮಕ್ಕಳ ಮೇಲೆ ಎಕ್ಸ್ ಯುವಿ 500 ಕಾರು ನಿಯಂತ್ರಣ ಕಳಕೊಂಡು ಮಕ್ಕಳನ್ನು ಅಡಿಗೆ ಹಾಕಿ ಹತ್ತಿರದ ವಿದ್ಯುತ್ ಕಂಭಕ್ಕೆ ಬಡಿದು ನಿಂತಿತ್ತು.

ಹಲೇಂದ್ರ ಮಾಂಜಿ (11), ರೋಹಿತ್ ಮಾಂಜಿ (9) ರಾಜು ಮಾಂಜಿ (11), ಮನೀಶ್ ಮಾಂಜಿ (11) ಎಂಬ ಹೆಸರಿನ ಮಕ್ಕಳು ಗಾಯಗೊಂಡಿದ್ದರು. ಇವರಲ್ಲಿ ಓರ್ವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದೆ. ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣವಾಗಿದ್ದು ಕಾರು ಚಲಾಯಿಸುತ್ತಿದ್ದ ವೇಳೆ ಸೌರವ್ ಗಂಗೂಲಿ ನಿದ್ದೆ ಮಾಡಿದ್ದು ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.