ಸನ್ಮಾರ್ಗ ವಾರ್ತೆ
ಹೊಸದಿಲ್ಲಿ : ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವನ್ನು ಪ್ರತಿಭಟಿಸಿ ಮಾರ್ಚ್ 1 ರಿಂದ ಹಾಲಿಗೆ ಒಂದು ಲೀಟರ್ ಗೆ ನೂರು ರೂಪಾಯಿ ಮಾಡಬೇಕೆಂದು ರೈತರು ಹೇಳಿದ್ದಾರೆ. ಪೆಟ್ರೋಲ್ ಬೆಲೆ ಬೇರೆ ಬೇರೆ ಪಟ್ಟಣಗಳಲ್ಲಿ 100 ರೂಪಾಯಿ ದಾಟಿದ ನಂತರ ಸಂಯುಕ್ತ ಕಿಸಾನ್ ಮೋರ್ಚಾ ಈ ತೀರ್ಮಾನಕ್ಕೆ ಬಂದಿದೆ.
ಪೆಟ್ರೋಲ್ ,ಡೀಸೆಲ್ ಬೆಲೆ ಹೆಚ್ಚುವುದು, ಸಾಗಾಟ ವೆಚ್ಚು ಹೆಚ್ಚುವುದು, ಜಾನುವಾರುಗಳ ಮೇವು ದುಬಾರಿಯೆನಿಸುವುದು. ಇನ್ನು ಇತರ ಖರ್ಚುಗಳು ಹೆಚ್ಚುವುದು ಇದಕ್ಕೆಲ್ಲ ಹಾಲು ಉತ್ಪಾದನೆಯಲ್ಲಿ ಬಾಧಕವಾಗಿದ್ದು, ಆದುದರಿಂದ ಹಾಲು ಲೀಟರ್ ದರವನ್ನು ನೂರು ರೂಪಾಯಿಯಾಗಿಸುವುದು ಅಗತ್ಯ ಎಂದು ಕಿಸಾನ್ ಮೋರ್ಚಾ ಹೇಳಿದೆ.
ಈಗ ಲೀಟರ್ ಗೆ 50 ರೂಪಾಯಿಗೆ ಹಾಲು ಮಾರಲಾಗುತ್ತಿದೆ. ಮಾರ್ಚ್ ಒಂದರಿಂದ ದುಪ್ಪಟ್ಟು ಮಾಡಬೇಕು. ರೈತರು ಇದಕ್ಕೆ ಸಂಬಂಧಿಸಿದ ತೀರ್ಮಾನ ತೆಗೆದುಕೊಂಡಿದ್ದರೆ ಭಾರತೀಯ ಕಿಸಾನ್ ಯೂನಿಯನ್ ಜಿಲ್ಲಾ ಮುಖ್ಯಸ್ಥ ಮಲ್ಕಿತ್ ಸಿಂಗ್ ಹೇಳಿದರು. ರೈತ ಹೋರಾಟವನ್ನು ಬೆಂಬಲಿಸಿ ಹೊಸ ತೀರ್ಮಾನಕ್ಕೆ ಬಂದಿದ್ದಾರೆ.
ಹಾಲಿನ ದರ ಹೆಚ್ಚಳ ಪ್ರತಿರೋಧಿಸಲು ಕೇಂದ್ರ ಸರಕಾರ ಎಲ್ಲ ಉಪಾಯಗಳನ್ನು ಮಾಡುತ್ತದೆ ಎಂದು ಗೊತ್ತಿದೆ. ಆದರೆ ತೀರ್ಮಾನದಿಂದ ರೈತರು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಬೆಲೆ ದುಪ್ಪಟ್ಟು ಮಾಡುವುದು ನಮ್ಮ ನಿರ್ಧಾರ ಎಂದು ಮಲ್ಕಿತ್ ಸಿಂಗ್ ಹೇಳಿದರು.
ರೈತರ ತೀರ್ಮಾನವನ್ನು ವಿರೋಧಿಸುವುದು ಕೇಂದ್ರ ಸರಕಾರದ ನಿರ್ಧಾರವೆಂದಾದರೆ ಮುಂಬರುವ ದಿನಗಳಲ್ಲಿ ತರಕಾರಿಯ ಬೆಲೆಯನ್ನು ಹೆಚ್ಚಿಸುತ್ತೇವೆ ಮತ್ತು ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದರು. ಕೃಷಿ ಕಾನೂನು ವಿರುದ್ಧ ಎಲ್ಲ ರಾಜ್ಯಗಳಲ್ಲಿಯೂ ಬೃಹತ್ ರ್ಯಾಲಿ ಸಂಘಟಿಸುವುದು ಸಂಯುಕ್ತ ಕಿಸಾನ್ ಮೋರ್ಚಾದ ತೀರ್ಮಾನವಾಗಿದೆ.