ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ: ದೀಪ್ ಸಿಧುವಿನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ: ಬಿಜೆಪಿ ಸಂಸದ ಸನ್ನಿ ಡಿಯೊಲ್ ಸ್ಪಷ್ಟನೆ

0
389

ಸನ್ಮಾರ್ಗ ವಾರ್ತೆ

ಮುಂಬೈ: ದೀಪ್ ಸಿಧುರೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೊಲ್ ಟ್ವೀಟ್ ಮಾಡಿ ಹೇಳಿದ್ದಾರೆ. ಮಂಗಳವಾರ ರೈತ ಹೋರಾಟದ ವೇಳೆ ನಡೆದ ಅಕ್ರಮ ಘಟನೆಗಳಲ್ಲಿ ದೀಪ್ ಸಿಧು ಪಾತ್ರವಿದೆ ಎಂದು ರೈತರು ಆರೋಪಿಸಿದ್ದು ತದನಂತರ ಸನ್ನಿ ಡಿಯೋಲ್ ಸ್ಪಷ್ಟೀಕರಣ ನೀಡಿದ್ದಾರೆ.

ಕೆಂಪುಕೋಟೆಯಲ್ಲಿ ನಡೆದ ಘಟನೆಗೆ ಅತ್ಯಂತ ದುಃಖ ಇದೆ. ನನಗಾಗಲಿ, ಕುಟುಂಬದವರಿಗಾಗಲಿ ದೀಪ್ ಸಿಧುವಿನೊಂದಿಗೆ ಯಾವುದೇ ಸಂಬಂಧ ಇಲ್ಲ ಎಂಬ ಕುರಿತು ನಾನು ಟ್ವಿಟ್ಟರ್‌ನಲ್ಲಿ ಡಿಸೆಂಬರ್ 6ರಂದು ಹೇಳಿಕೆ ನೀಡಿದ್ದೇನೆ ಎಂದು ಡಿಯೊಲ್ ಟ್ವೀಟಿಸಿದ್ದಾರೆ.

ರೈತರ ಪ್ರತಿಭಟನೆಯನ್ನು ತಪ್ಪು ದಾರಿಗೆಳೆದವರು ದೀಪ್ ಸಿಧು ಎಂದು ರೈತ ಸಂಘಟನೆಯ ನಾಯಕರು ಹೇಳಿದ್ದಾರೆ. ದೀಪ್ ಸಿಧು ಬಿಜೆಪಿಗ ಮತ್ತು ಸನ್ನಿ ಡಿಯೋಲ್‍ರ ಚುನಾವಣಾ ಪ್ರಚಾರದಲ್ಲಿ ಸಕ್ರಿಯನಾಗಿದ್ದ ಎಂದು ರೈತ ನಾಯಕರು ತಿಳಿಸಿದ್ದಾರೆ.