ಗುಜರಾತ್ ಹಿಂಸಾಚಾರ: 17 ಮಂದಿಯನ್ನು ಕೊಲೆಗೈದ 22 ಆರೋಪಿಗಳ ಖುಲಾಸೆ

0
165

ಸನ್ಮಾರ್ಗ ವಾರ್ತೆ

ಗಾಂಧಿ ನಗರ: ಗುಜರಾತ್ ಹಿಂಸಾಚಾರದ ವೇಳೆ ಗೋದ್ರಾದಲ್ಲಿ ಎರಡು ಮಕ್ಕಳ ಸಹಿತ 17 ಮುಸ್ಲಿಮರನ್ನು ಕೊಲೆಗೈದ ಪ್ರಕರಣದ 22 ಆರೋಪಿಗಳನ್ನು ಗುಜರಾತ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಪಂಚಮಹಲ್ ಜಿಲ್ಲೆಯ ಹಲೋಲ್ ನಗರದ ನ್ಯಾಯಾಲಯ ಈ ತೀರ್ಪು ನೀಡಿದೆ .
2002 ರಲ್ಲಿ ನಡೆದ ಗಲಭೆಯಲ್ಲಿ ದೇಶಲಾಲ್ ಗ್ರಾಮದಲ್ಲಿ 17 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಸಾಕ್ಷಿಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಂಟು ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಸಾಕ್ಷಿಗಳನ್ನು ನಾಶಪಡಿಸಲು ಶವಗಳನ್ನು ಬೆಂಕಿ ಕೊಟ್ಟು ಉರಿಸಿದ್ದರು ಎಂಬುದು ರುಜುವಾತಾಗಿದ್ದರೂ ಸಾಕ್ಷಿಗಳಿಲ್ಲ ಎಂದು ಹೇಳಿ  ಅಡಿಷನಲ್ ಸೆಷನ್ಸ್ ಜಡ್ಜ್ ಹರ್ಷ ತ್ರಿವೇದಿ  ಈ ತೀರ್ಪಿತ್ತರು.