ಸನ್ಮಾರ್ಗ ವಾರ್ತೆ
ಬೆಳಗಾವಿ: ಜಮಾಅತೆ ಇಸ್ಲಾಮೀ ಹಿಂದ್ ಬೆಳಗಾವಿ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಮತ್ತು ಮದೀನಾ ರಿಲೀಫ್ ಫೌಂಡೇಶನ್ ಸಹಯೋಗದೊಂದಿಗೆ ಪ್ರವಾಹ ಪೀಡಿತರಿಗೆ ಜಮೀನನ್ನು ಹಸ್ತಾಂತರಿಸಲಾಯಿತು.
ಸುಮಾರು ಒಂದು ಎಕರೆ ಜಮೀನನ್ನು 29 ಕುಟುಂಬಗಳಿಗೆ ಹಂಚಲಾಗಿದ್ದು, ಹಟ್ಟಿಹಳ್ಳಿ ಪ್ರದೇಶದಲ್ಲಿ 2019 ರ ಪ್ರವಾಹ ಪೀಡಿತರಾಗಿದ್ದ ಸುಮಾರು 29 ಕುಟುಂಬಗಳನ್ನು ಗುರುತಿಸಿ ಸೂಕ್ತ ಫಲನುಭವಿಗಳಿಗೆ ಜಮೀನನ್ನು ಹಂಚಿಕೆ ಮಾಡಲಾಗಿದೆ.
ಸೂಕ್ತ ಲೇಔಟ್ ಮತ್ತು ರಸ್ತೆಗಳನ್ನು ಒದಗಿಸಿ ಎಲ್ಲ ರೀತಿಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಸಂತ್ರಸ್ತರಿಗೆ ಜಮೀನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಎಚ್.ಆರ್.ಎಸ್ನ ಮುಖ್ಯಸ್ಥರು ಯಾಸೀನ್ ಮಕಾಂದಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.