ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪ್ರಧಾನಿ ಮೋದಿಯವರೇ ಹೆದರಿಕೆಯಾಯ್ತಾ?. ನೀವು ಅಂಬಾನಿ – ಅದಾನಿಗೆ ಕೊಟ್ಟಷ್ಟೇ ಹಣವನ್ನು ನಾವು ಭಾರತದ ಬಡವರಿಗೆ ನೀಡುತ್ತೇವೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಬುಧವಾರ ಬಿಜೆಪಿಯ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ, ರಾಹುಲ್ ಗಾಂಧಿ ಅವರು ಚುನಾವಣೆ ಘೋಷಣೆಯಾದ ಬಳಿಕ ಅದಾನಿ ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ಮೋದಿಗೆ ವೀಡಿಯೊ ಮೂಲಕ ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ವೀಡಿಯೊದ ಪೂರ್ಣ ಪಾಠ ಇಲ್ಲಿದೆ. “ಮೋದಿಯವರೇ ನಮಸ್ಕಾರ, ಸ್ವಲ್ಪ ಹೆದರಿಕೊಂಡಿರಾ ಹೇಗೆ?, ಸಾಮಾನ್ಯವಾಗಿ ನೀವು ಬಾಗಿಲು ಮುಚ್ಚಿದ ಕೊಠಡಿಗಳಲ್ಲಿ ಅಂಬಾನಿ – ಅದಾನಿ ಬಗ್ಗೆ ಮಾತನಾಡುತ್ತಿದ್ದಿರಿ. ಈಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಅದಾನಿ ಅದಾನಿ – ಅಂಬಾನಿ ಎಂದು ಹೆಸರು ಹೇಳಿದ್ದೀರಿ. ನಿಮಗೆ ಅವರು ಟೆಂಪೋಗಳಲ್ಲಿ ಹಣ ತುಂಬಿ ಕೊಡುತ್ತಾರೆ ಎಂದು ತಿಳಿದಿದೆ. ಇದೇನು ನಿಮ್ಮ ವೈಯುಕ್ತಿಕ ಅನುಭವವೇ?. ಒಂದು ಕೆಲಸ ಮಾಡಿ, ಸಿಬಿಐ – ಈಡಿಯನ್ನು ಅಂಬಾನಿ – ಅದಾನಿ ಬಳಿಗೆ ಕಳುಹಿಸಿ. ಪರಿಶೀಲನೆ ಮಾಡಿಸಿ, ವಿಚಾರಣೆ ಮಾಡಿಸಿ. ಆದಷ್ಟು ಬೇಗ ಮಾಡಿಸಿ. ಹೆದರಿಕೊಳ್ಳಬೇಡಿ ಮೋದಿಯವರೇ” ಎಂದು ರಾಹುಲ್ ಹೇಳಿದ್ದಾರೆ.