ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಟಿ-20 ವಿಶ್ವಕಪ್ನ ಸೆಮಿಫೈನಲ್ ಪಂದ್ಯಕ್ಕಿಂತ ಮುಂಚೆ ರಾಷ್ಟ್ರೀಯ ಮಾಧ್ಯಮ ಎಬಿಪಿ ನ್ಯೂಸ್ನಲ್ಲಿ ನಡೆದ ಜ್ಯೋತಿಷಿಗಳ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಜ್ಯೋತಿಷಿಗಳ ಪ್ರಕಾರ ಭಾರತ ಇಂಗ್ಲೆಂಡ್ ವಿರುದ್ಧ ಗೆಲ್ಲುತ್ತದೆ ಎಂದು ಹೇಳಿದ್ದರು. ಆದರೆ ಭಾರತೀಯ ತಂಡ ಹೀನಾಯ ಸೋಲುಂಡಿದೆ. ತದನಂತರ ಸಾಮಾಜಿಕ ಮಾಧ್ಯಮಗಳು ಈ ಕುರಿತು ಚರ್ಚಿಸುತ್ತಿವೆ.
ಹನ್ನೊಂದು ಜ್ಯೋತಿಷಿಗಳು ಚ್ಯಾನೆಲ್ನಲ್ಲಿ ಕುಳಿತು ಚರ್ಚಿಸಿದ್ದರು. ಸ್ಪರ್ಧೆ ಪೈಪೋಟಿಯದ್ದು ಎಂದು ಹೆಚ್ಚಿನವರು ಹೇಳಿದ್ದರು. ಇಂಗ್ಲೆಂಡನ್ನು ಸೋಲಿಸಿ ಭಾರತ ಫೈನಲ್ಗೆ ತಲುಪುತ್ತದೆ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಅವರು ಹೇಳಿದ್ದೇ ಬಂತು ಭಾರತ ಸೆಮಿಫೈನಲ್ನಲ್ಲಿ ಗೆಲ್ಲಲಿಲ್ಲ ಎಂಬುದು ವಾಸ್ತವ.
ಅಖಿಲೇಶ್ ಆನಂದ್ ಚರ್ಚೆಗೆ ನೇತೃತ್ವ ಕೊಟ್ಟಿದ್ದರು. ಸೆಮಿಫೈನಲ್ನಲ್ಲಿ ಏನಾಗುತ್ತದೆ. ಭಾರತದ ಗೆಲುವಿನ ಸಾಧ್ಯತೆಗಳು, ಮುಖ್ಯ ಆಟಗಾರರ ಗ್ರಹಗಳ ಸ್ಥಿತಿ ಚರ್ಚೆಗೆ ಬಂದಿತ್ತು. ಶಂಖ ಊದಿ ಚರ್ಚೆಗೆ ಚಾಲನೆ ಕೊಡಲಾಗಿತ್ತು.
ಭಾರತ ಗೆಲ್ಲುವ ಸಾಧ್ಯತೆಯನ್ನು 60:40 ಎಂದು ಒಬ್ಬರು ಎರಡು ತಂಡಗಳ ಗ್ರಹಗಳನ್ನು ಪರಿಶೀಲಿಸಿ ಹೇಳಿದರು. ಕಠಿಣ ಸ್ಪರ್ಧೆ ಇದೆ ಅಂತಿಮ ಗೆಲುವು ಭಾರತದ್ದು ಎಂದು ಇನ್ನೊಬ್ಬರು ಹೇಳಿದ್ದರು. ಭಾರತ ತಂಡದ ಮೂವರ ಜಾತಕ ಗುರು ಆಗಿದೆ ಗುರು ಬಲದಿಂದ ಗೆಲುವು ಭಾರತಕ್ಕೆ ಸಿಗುತ್ತದೆ ಎಂದು ಮತ್ತೊಬ್ಬರು ಎಂದರು. ಭಾರತ ನಾಯಕ ರೋಹಿತ್ ಶರ್ಮ ಮತ್ತು ಇಂಗ್ಲೆಂಡಿನ ನಾಯಕ ಜೋಸ್ ಬಟ್ಲರ್ ಗೃಹ ಶುಕ್ರ ಆದ್ದರಿಂದ ಕಠಿಣ ಸ್ಪರ್ಧೆ ಇದೆ ಎಂದು ಇನ್ನೊಬ್ಬರು ಹೇಳಿದ್ದರು.
ಶರ್ಮ ಜನ್ಮದಿನವನ್ನು ನೋಡಿ ಅವರು ಅತ್ಯುತ್ತಮ ಪ್ರದರ್ಶನ ನೀಡುವರು ಎಂದು ಹೇಳಿದ್ದರು. ಹೀಗೆ ಹೇಳಿದ್ದೆಲ್ಲ ಸರಿ ಆದರೆ ಸೆಮಿಫೈನಲ್ನಲ್ಲಿ ಭಾರತ ಸೋಲುತ್ತದೆ ಎಂದು ಯಾರೂ ಹೇಳಿರಲಿಲ್ಲ. ಹೇಳಿದವರೆಲ್ಲ ಹೇಳಿದ್ದೇ ಬಂತು ಭಾರತ ಯಾವುದೇ ವಿಕೆಟ್ ಪಡೆಯದೇ ಇಂಗ್ಲೆಂಡಿನ ವಿರುದ್ಧ ಸೋಲುಂಡಿದೆ. ಆದರೆ, ಜ್ಯೋತಿಷಿಗಳ ಕ್ರಿಕೆಟ್ ಭವಿಷ್ಯವು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ.