ಸನ್ಮಾರ್ಗ ವಾರ್ತೆ
ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಗಾಲ್ತಾ ಪೀಠ್ ಆಶ್ರಮಕ್ಕೆ ಜಮಾಅತೆ ಇಸ್ಲಾಮಿ ಹಿಂದ್(ಜೆಐಹೆಚ್)ನ ನಿಯೋಗವು ಭೇಟಿ ನೀಡಿ ಪುರೋಹಿತರಾದ ಪೀಠಾಧೀಶ್ವರ ಸ್ವಾಮಿ ಅವಧೇಶಾಚಾರ್ಯ ಜಿ ಮತ್ತು ಯುವಚಾರ್ಯ ಜಿ ಅವರೊಂದಿಗೆ ಸಭೆ ನಡೆಸಿತು.
ಜೆಐಹೆಚ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊ.ಮುಹಮ್ಮದ್ ಸಲೀಮ್ ಇಂಜಿನಿಯರ್ರವರ ನೇತೃತ್ವದ ಜೆಐಹೆಚ್ ನಿಯೋಗವು ದೇಶದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಕೋಮು ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯತೆಗಳ ಕುರಿತು ಚರ್ಚಿಸಿತು. ಈ ಆಶಯಗಳನ್ನು ಶ್ಲಾಘಿಸಿದ ಪೀಠಾಧೀಶ್ವರರು ಈ ಉದಾತ್ತ ಉದ್ದೇಶಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಜೆಐಹೆಚ್ ರಾಜಸ್ಥಾನ ಕಾರ್ಯದರ್ಶಿ ಡಾ.ಮುಹಮ್ಮದ್ ಇಕ್ಬಾಲ್, ನಯೀಮ್ ರಬ್ಬಾನಿ ಮತ್ತು ಶಾಹಿದ್ ಇದ್ದರು.