ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ, ಸ್ಥಾನೀಯ ಅಧ್ಯಕ್ಷರಾಗಿದ್ದ ಶಾಹುಲ್ ಹಮೀದ್ ಪರ್ಲಿಯ ನಿಧನ

0
767

ಸನ್ಮಾರ್ಗ ವಾರ್ತೆ

ಬಿಸಿ ರೋಡ್: ಇಲ್ಲಿನ ಪರ್ಲಿಯದ ಶಾಹುಲ್ ಹಮೀದ್ ಹಮ್ಮಬ್ಬ ( 64) ಅವರು ಹೃದಯಾಘಾತದಿಂದ ಇಂದು (ಜುಲೈ 11) ನಿಧನರಾಗಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ನ ಸದಸ್ಯರಾಗಿದ್ದ ಇವರು ಪರ್ಲಿಯ ಸ್ಥಾನೀಯ ಜಮಾಅತ್ ನ ಅಧ್ಯಕ್ಷರಾಗಿಯೂ ಹೊಣೆಗಾರಿಕೆ ನಿಭಾಯಿಸಿದ್ದರು. ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಜನಾನುರಾಗಿ ಮತ್ತು ನಿಸ್ವಾರ್ಥ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಇವರು ಜುಲೈ 11ರಂದು ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಸದ್ಭಾವನ ಮಂಚ್ ನ ಬಂಧುಗಳ ಸಭೆಗೆ ಬಿ ಸಿ ರೋಡ್ ವಲಯದ ಸದ್ಭಾವನ ಮಂಚ್ ಕಾರ್ಯಕರ್ತರನ್ನು ಮಂಗಳೂರಿಗೆ ಕರೆತರುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಸಲೀಂ ಇಂಜಿನಿಯರ್ ಭಾಗವಹಿಸುವ ಈ ಸಭೆಗೆ ಅವರು ಸಾಕಷ್ಟು ತಯಾರಿಗಳನ್ನೂ ನಡೆಸಿದ್ದರು.

ಇವರು ಸನ್ಮಾರ್ಗ ಪತ್ರಿಕೆಯ ಓದುಗರಾಗಿದ್ದುದಷ್ಟೇ ಅಲ್ಲ ಪತ್ರಿಕೆಯನ್ನು ಇತರರಿಗೆ ತಲುಪಿಸುವಲ್ಲೂ ಮುತುವರ್ಜಿ ವಹಿಸುತ್ತಿದ್ದರು.

ಮೃತರು ಜಮಾಅತ್ ಸದಸ್ಯೆಯಾಗಿರುವ ಪತ್ನಿ, ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಶಾಹುಲ್ ಹಮೀದ್ ಅವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಅಧ್ಯಕ್ಷ ಡಾ| ಸಾದ್ ಬೆಳಗಾಮಿ, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ, ದಕ್ಷಿಣ ಕನ್ನಡ ಜಿಲ್ಲಾ ಹೊಣೆಗಾರರಾಗಿರುವ ಸಯೀದ್ ಇಸ್ಮಾಈಲ್, ಅಮೀನ್ ಅಹ್ಸನ್, ಅಬ್ದುಲ್ ಗಪೂರ್ ಕುಳಾಯಿ, ಮೈಸೂರು ವಲಯ ಸಂಚಾಲಕರಾದ ಅಬ್ದುಸ್ಸಲಾಂ ಉಪ್ಪಿನಂಗಡಿ, ಮಂಗಳೂರು ಸ್ಥಾನೀಯ ಅಧ್ಯಕ್ಷ ಇಸ್ಹಾಕ್ ಪುತ್ತೂರು, ಪರ್ಲಿಯ ಸ್ಥಾನೀಯ ಅಧ್ಯಕ್ಷರಾದ ಅಮಾನುಲ್ಲಾ ಖಾನ್ ತರೀಕೆರೆ, ಅನುಗ್ರಹ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸೀನ್ ಬೇಗ್ ಮುಂತಾದವರು ಸಂತಾಪ ಸೂಚಿಸಿದ್ದಾರೆ ಮತ್ತು ಮೃತರಿಗಾಗಿ ಪ್ರಾರ್ಥಿಸಿದ್ದಾರೆ.

ಅಲ್ಲಾಹನು ಮೃತರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.