ಸನ್ಮಾರ್ಗ ವಾರ್ತೆ
ಲಕ್ನೊ,ಜು.4: ‘ಅವನನ್ನು ಎನ್ಕೌಂಟರ್ನಲ್ಲಿ ಕೊಲ್ಲಬೇಕು’ – ಎಂಟು ಪೊಲೀಸರನ್ನು ಕೊಂದ ಗೂಂಡಾ ತಂಡದ ಮುಖ್ಯಸ್ಥ ವಿಕಾಸ್ ದುಬೆಯ ತಾಯಿ ಹೇಳಿದ ಮಾತು ಇದು. ಪೊಲೀಸರ ಸಾವಿಗೆ ಶೋಕ ವ್ಯಕ್ತಪಡಿಸಿದ ಅವರು ಇದೇ ಸ್ಥಿತಿ ತನ್ನ ಮಗನಿಗೆ ಬಂದರೂ ತನಗೆ ಸಂಕಟ ಇಲ್ಲ ಎಂದಿದ್ದಾರೆ.
ಕೊನೆಯ ಮಗ ದೀಪ್ ಪ್ರಕಾಶ್ ದುಬೆಯೊಂದಿಗೆ ಕೃಷ್ಣನಗರದ ಇಂದ್ರಲೋಕ ಕಾಲನಿಯಲ್ಲಿ ದುಬೆಯ ತಾಯಿ ಸರಳದೇವಿ ವಾಸವಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಪ್ರಾರ್ಥನೆಗಾಗಿ ಹೊರಹೋದ ದೀಪ್ ಪ್ರಕಾಶ್ ಮರಳಿ ಬಂದಿಲ್ಲ. ಎಪ್ರಿಲ್ನಲ್ಲಿ ತನ್ನ ಭೇಟಿಗೆ ಬಂದಾಗ ವಿಕಾಸ್ ಈಗ ಎಲ್ಲಿದ್ದಾನೆಂದು ಗೊತ್ತಿಲ್ಲ.
ಶುಕ್ರವಾರ ಬೆಳಗ್ಗೆ ಇಂದ್ರನಗರದ ಇವರ ಮನೆಯ ತಪಾಸಣೆಗೆ ಬಂದ ಪೊಲೀಸರು ಪತ್ನಿ ಅಂಜಲಿ ಮತ್ತು ಸಂಬಂಧಿಕರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಇನ್ನೊಂದು ತಂಡ ದೀಪ್ ಪ್ರಕಾಶ್ನನ್ನು ಹುಡುಕುತ್ತಿದೆ. ಕಾನ್ಪುರದ ಬಿಕ್ರು ಗ್ರಾಮದ ಕುಟುಂಬದ ಮನೆಯಲ್ಲಿ ವಿಕಾಸ್ನ ತಂದೆ ವಾಸವಿದ್ದಾರೆ. ವಿಕಾಸನ ಪತ್ನಿ ಸೋನಾ ಮತ್ತು ಮಕ್ಕಳಾದ ಆಕಾಶ್ ಮತ್ತು ಶಾಂತನು ಅಲ್ಲಿಯೇ ವಾಸಿಸುತ್ತಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.