ದನ ಕಳ್ಳತನ ಆರೋಪ: ಗುಂಪಿನಿಂದ ಹಿಂದೂ ವ್ಯಕ್ತಿಯ ಹತ್ಯೆ

0
692

ಕೊಲ್ಕತ್ತಾ,ಮೇ 3: ಬಿಹಾರದ ಅರಾರಿಯಲ್ಲಿ 44 ವಷದ ಮಹೇಶ್ ಯಾದವ್ ಎನ್ನುವ ವ್ಯಕ್ತಿಯನ್ನು ‘ದನಕಳ್ಳ’ ಎಂದು ಆರೋಪಿಸಿ ಜನರ ಗುಂಪು ಥಳಿಸಿ ಕೊಲೆಮಾಡಿದೆ. ಗಂಭೀರ ಗಾಯಗೊಂಡಿದ್ದ ಮಹೇಶ್ ಯಾದವ್ ಗುರುವಾರ ಮೃತಪಟ್ಟಿದ್ದಾರೆ. ಅರಾರಿಯ ದಕ್ ಹರಿಪೂರ್ ಗ್ರಾಮದ ರಾಬರ್ಟ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹೇಶ್ ಯಾದವ್ ಮತ್ತು ಇಬ್ಬರು ಸಹಾಯಕರು ಸೇರಿ ದನ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಊರವರು ಆರೋಪಿಸುತ್ತಿದ್ದಾರೆ. ಈತ ಈ ಹಿಂದೆಯೂ ದನ ಕಳ್ಳತನ ಮಾಡಿದ್ದು ಈತನ ವಿರುದ್ಧ ದನ ಕಳ್ಳತನದ ಹಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.