ಉ.ಪ್ರದೇಶದಲ್ಲಿ ಯಾರು ಸುರಕ್ಷಿತರಲ್ಲ: ವಕೀಲನ ಹತ್ಯೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ

0
456

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಯಾರು ಸುರಕ್ಷಿತರಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹೇಳಿದರು. ಉತ್ತರ ಪ್ರದೇಶದಲ್ಲಿ ಯಾರೂ ಸುರಕ್ಷಿತವಲ್ಲ. ಮಹಿಳೆಯರು, ರೈತರು, ವಕೀಲರು ಕೂಡ ಸುರಕ್ಷಿತರಾಗಿಲ್ಲ ಎಂದು ಅವರು ಹೇಳಿದ್ದಾರೆ

ಉತ್ತರ ಪ್ರದೇಶದ ಕೋರ್ಟಿನ ವರಾಂಡದಲ್ಲಿ ವಕೀಲರೊಬ್ಬರು ಗುಂಡೇಟಿಗೆ ಬಲಿಯಾದ ಬಳಿಕ ಪ್ರಿಯಾಂಕರಿಂದ ಈ ಪ್ರತಿಕ್ರಿಯೆ ಬಂದಿದೆ. ಯೋಗಿ ಆದಿತ್ಯನಾಥರ ನೇತೃತ್ವದ ಬಿಜೆಪಿ ಸರಕಾರವನ್ನು ಅವರು ಈ ರೀತಿ ಟೀಕಿಸಿದರು.

ಕಾನೂನು ವ್ಯವಸ್ಥೆ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ ಶಾಜಹಾನ್ ಪುರದಲ್ಲಿ ಹಾಡಹಗಲು, ಅದು ಕೋರ್ಟು ಪರಿಸರದಲ್ಲಾದ ವಕೀಲರ ದಾರುಣ ಹತ್ಯೆಯು ಉತ್ತರಪ್ರದೇಶದಲ್ಲಿ ಯಾರೂ ಸುರಕ್ಷಿತರಲ್ಲ ಎಂಬುದನ್ನು ತೋರಿಸಿಕೊಡುತ್ತಿದೆ. ಮಹಿಳೆಯರು, ರೈತರು ಮಾತ್ರವಲ್ಲ ವಕೀಲರು ಕೂಡ ಸುರಕ್ಷಿತರಲ್ಲ ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.

ಶಾಜಹಾನ್‍ಪುರ ಜಿಲ್ಲಾ ಕೋರ್ಟಿನ ಸಮುಚ್ಚಯದಲ್ಲಿ ನಿನ್ನೆ ವಕೀಲರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಕೋರ್ಟಿನ ಮೂರನೆ ಮಹಡಿಯಲ್ಲಿ ಈ ಘಟನೆ ನಡೆದಿತ್ತು. ಭೂಪೇಂದ್ರ ಪ್ರತಾಪ್ ಸಿಂಗ್ ಗುಂಡಿಗೆ ಬಲಿಯಾದ ವಕೀಲ.ಕೊಲೆ ನಡೆದ ಸ್ಥಳದಲ್ಲಿ ನಾಡ ಬಂದೂಕು ಲಭಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.