ಹೈದರಾಬಾದ್: ಹೈದರಾಬಾದಿನಲ್ಲಿ ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದು ವಿದ್ಯಾರ್ಥಿಯ ಹೆಸರು ಗೋಪಿರಾಜು(16) ಎಂದಾಗಿದೆ. ಹೈದರಾಬಾದಿನ ಪರೀಕ್ಷಾ ಕೇಂದ್ರವೊಂದರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪರೀಕ್ಷೆ ಆರಂಭವಾಗುವ ಮೊದಲು ಗೋಪಿ ರಾಜುಗೆ ಎದೆನೋವು ಕಾಣಿಸಿಕೊಂಡಿತು. ಅಸ್ಪತ್ರೆಗೆ ಹೋಗಿ ಅರೋಗ್ಯ ತಪಾಸಣೆ ಮಾಡಿಸಿಕೊಂಡು ಬರೋಣ ಎಂದರೆ ಅದಕ್ಕೆ ಒಪ್ಪದೆ ಪರೀಕ್ಷೆ ಬರೆಯಲು ಮುಂದಾದ. ಆದರೆ ಪರೀಕ್ಷೆ ಬರೆಯುವ ವೇಳೆ ಕುಸಿದು ಬಿದ್ದನು ಎಂದು ಯುಎನ್ಐ ವರದಿ ಮಾಡಿದೆ.
ನಂತರ ಪರೀಕ್ಷಾ ಕೇಂದ್ರದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ವಿದ್ಯಾರ್ಥಿ ನಿಧನನಾದನು. ವಿದ್ಯಾರ್ಥಿಯ ಹೆತ್ತವರು ನೀಡಿದ ದೂರಿನಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.