ಶಿವಮೊಗ್ಗ: ಹೆಚ್ ಆರ್ ಎಸ್ ಝೋನಲ್ ಲೀಡರ್ ಖಾಲಿದ್ ರವರಿಗೆ ಸನ್ಮಾನ

0
638

ಸನ್ಮಾರ್ಗ ವಾರ್ತೆ

ಶಿವಮೊಗ್ಗ: ಸಿಟಿ ಉರ್ದು ಪತ್ರಿಕೆ “ಆಜ್ ಕ ಇನ್ಕಿಲಾಬ್” ಇದರ ವೆಬ್ ಸೈಟ್ ಉದ್ಘಾಟನಾ ಕಾರ್ಯಕ್ರಮವು ಶಿವಮೊಗ್ಗ ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೆಚ್.ಆರ್.ಎಸ್ ಶಿವಮೊಗ್ಗ ಝೋನಲ್ ಲೀಡರ್ ಮಹಮ್ಮದ್ ಖಾಲಿದ್ ಹಾಗೂ ಅವರ ತಂಡದ ಸೇವಾ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು.

ಪ್ರಕೃತಿ ವಿಕೋಪ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ರೋಗಿಗಳ ಆರೈಕೆ, ಸಂತ್ರಸ್ತರಿಗೆ ಮನೆ, ಶೌಚಾಲಯಗಳ ನಿರ್ಮಾಣ, ಶುಚಿತ್ವಗಳ ಶಿಬಿರ, ಕೋವಿಡ್, ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಹಾರ ವಿತರಣೆ, ರೋಗಿಗಳ ಸೇವೆ ಹೀಗೆ ಹತ್ತು ಹಲವಾರು ಸೇವೆಗಳಲ್ಲಿ ತಮ್ಮ ತಂಡವನ್ನು ತೊಡಗಿಸಿಕೊಂಡಿದ್ದಾರೆ.

ಇವರು ಉತ್ತಮ ಕಲಾವಿದ ಕೂಡ ಆಗಿದ್ದು, ಆರೋಗ್ಯ ಪೂರ್ಣ ಸಮಾಜ ಕಟ್ಟುವ ಉದ್ದೇಶದಿಂದ ತಾನೇ ರಚಿಸಿದ ಮೋಡಲ್ಸ್ ಗಳಿಂದ ಸಾರ್ವಜನಿಕರಿಗೆ ಅನೇಕ ಪ್ರದರ್ಶನಗಳನ್ನು ಮಂಗಳೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಆಯೋಜಿಸಿ, ಸಾಮಾಜಿಕ ಸಾಮರಸ್ಯಕ್ಕಾಗಿ ದುಡಿಯುತ್ತಿದ್ದಾರೆ. ಇವರ ಈ ಎಲ್ಲಾ ಜನಪರ ಸೇವೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.