ತಮಿಳ್ನಾಡಿನ ಉನ್ನತ ಶಿಕ್ಷಣ ಸಚಿವರಿಗೆ ಕೊರೋನ ದೃಢ

0
306

ಸನ್ಮಾರ್ಗ ವಾರ್ತೆ

ಚೆನ್ನೈ,ಜೂ.19: ತಮಿಳ್ನಾಡಿನ ಉನ್ನತ ಶಿಕ್ಷಣ ಸಚಿವ ಕೆ.ಪಿ. ಅಂಬಳಗನ್‍ರಿಗೆ ಕೊರೋನ ದೃಢಪಟ್ಟಿದೆ. ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತಮಿಳ್ನಾಡಿನ ಮುಖ್ಯಮಂತ್ರಿ ಕಚೇರಿಯಲ್ಲಿ ಸೋಂಕಿನಿಂದಾಗಿ ಮುಖ್ಯಮಂತ್ರಿಯ ಕಾರ್ಯದರ್ಶಿ ನಿಧನರಾಗಿದ್ದಾರೆ.ಇದುವರೆಗೆ ಮುಖ್ಯಮಂತ್ರಿ ಪಳನಿಸ್ವಾಮಿಯವರ ಕಚೇರಿಯ ಒಂಬತ್ತು ಜನರಿಗೆ ಕೊರೋನ ದೃಢಪಟ್ಟಿದೆ. ತಮಿಳ್ನಾಡಿನಲ್ಲಿ 52,334 ಮಂದಿಗೆ ಕೊರೋನ ಸೊಂಕು ತಗುಲಿದ್ದು, 625 ಮಂದಿ ಮೃತಪಟ್ಟಿದ್ದಾರೆ. ಗುರುವಾರ 49 ಮಂದಿ ಕೊರೋನಕ್ಕೆ ಬಲಿಯಾದರು. ಚೆನ್ನೈ ನಗರದಲ್ಲಿ 37000 ಕೊರೋನ ಸೋಂಕಿತರಿದ್ದಾರೆ.

ಕೊರೋನ ಇರುವವರ ಸಂಖ್ಯೆಯಲ್ಲಾದ ಭಾರೀ ಹೆಚ್ಚಳವನ್ನು ಪರಿಗಣಿಸಿ ತಮಿಳ್ನಾಡಿನ ನಾಲ್ಕು ಜಿಲ್ಲೆಗಳಲ್ಲಿ ಇಂದಿನಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಯಿತು. ಜೂನ್ 31ರವರೆಗೆ ಲಾಕ್‍ಡೌನ್ ಮುಂದುವರೆಯಲಿದ್ದು, ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಚೆನ್ನೈ ಕಾಂಚಿಪುರಂ, ತಿರುವಳ್ಳೂರ್, ಚೆಂಗಲ್‍ಪೇಟ್‍ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್‍ನ ಘೋಷಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.