ಸನ್ಮಾರ್ಗ ವಾರ್ತೆ
ಲಕ್ನೊ,ಜು.8: ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಗುಂಡು ಹಾರಿಸಿ ಕೊಲೆ ಮಾಡಿದ ಗೂಂಡಾ ತಂಡದ ಮುಖ್ಯಸ್ಥ ವಿಕಾಸ್ ದುಬೆಯ ಬಲಗೈ ಬಂಟ ಅಮರ್ ದುಬೆ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಹಾಮಿರ್ಪುರದಲ್ಲಿ ಬುಧವಾರ ಬೆಳಗ್ಗೆ ನಡೆದ ಸ್ಪೆಷಲ್ ಟಾಸ್ಕ್ ಪೋರ್ಸ್ನೊಂದಿಗೆ ಘರ್ಷಣೆಯಲ್ಲಿ ಅಮರ್ ದುಬೆ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ.
ಪೊಲೀಸರ ಕೊಲೆಯಲ್ಲಿ ಈತನೂ ಇದ್ದ ಎಂದು ಹೇಳಲಾಗುತ್ತಿದೆ. ಅಮೆರ್ ದುಬೆ ಮಥುರಾದಲ್ಲಿದ್ದಾನೆ ಎಂಬ ವಿವರ ಲಭಿಸಿದ ಬೆನ್ನಿಗೆ ಪೊಲೀಸರು ಅಲ್ಲಿಗೆ ಹೋಗಿದ್ದರು. ನಂತರ ಜಿಲ್ಲಾ ಪೊಲೀಸರ ಸಹಾಯದಿಂದ ಪ್ರದೇಶವನ್ನು ಬಂದ್ ಮಾಡಿ ಹುಡುಕಾಟ ನಡೆಸಿದ್ದರು.
ಈ ಸಂದರ್ಭದಲ್ಲಿ ಅಮರ್ ಪೊಲೀಸರಿಗೆ ಗುಂಡು ಹಾರಿಸಿದ್ದಾನೆ. ಪೊಲೀಸರು ನಂತರ ಗುಂಡು ಹಾರಿಸಿದ್ದರಿಂದ ದುಬೆ ಕೊಲ್ಲಲ್ಪಟ್ಟನು. ಇದೇ ವೇಳೆ ವಿಕಾಸ ದುಬೆಯನ್ನು ಹುಡುಕುವುದನ್ನು ಪೊಲೀಸರು ಮುಂದುವರಿಸಿದ್ದಾರೆ. ಈತನ ಮೇಲೆ 60ರಷ್ಟು ಕ್ರಿಮಿನಲ್ ಕೇಸಿದೆ. ಈತನನ್ನು ಬಂಧಿಸಲು ನೆರವು ನೀಡುವವರಿಗೆ ಎರಡು ಲಕ್ಷ ಬಹುಮಾವನ್ನು ಘೋಷಿಸಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.