ಸನ್ಮಾರ್ಗ ವಾರ್ತೆ
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಸ್.ಕ್ಯೂ.ಆರ್ ಇಲ್ಯಾಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಅರ್ಮುಗಂ ಅವರು ಸಹರಾನ್ಪುರಕ್ಕೆ ತೆರಳಿ ಭೀಮ್ ಆರ್ಮಿ ಮುಖ್ಯಸ್ಥ ಮತ್ತು ಉದಯೋನ್ಮುಖ ದಲಿತ ನಾಯಕ ಶ್ರೀ. ಚಂದ್ರಶೇಖರ್ ಆಜಾದ್ ಅವರನ್ನು ಭೇಟಿ ಮಾಡಿದರು.
ಅವರು ಇತ್ತೀಚೆಗೆ ಬುಲೆಟ್ ಗಾಯಗೊಂಡು ತಮ್ಮ ಗ್ರಾಮ ಚುಟ್ಮಲ್ಪುರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೆಲ್ಫೇರ್ ಪಕ್ಷದ ಮುಖಂಡರು ಚಂದ್ರಶೇಖರ್ ಆಜಾದ್ ರಿಗೆ ಸಾಂತ್ವನ ಹೇಳಿದರು. ತಮ್ಮ ಬೆಂಬಲ ಮತ್ತು ಐಕ್ಯಮತ್ಯಯನ್ನು ಸೂಚಿಸಿದರು.