ಭೋಪಾಲ,ಮೇ 20: ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಪಮತಕ್ಕಿಳಿದಿದೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ಬಿಜೆಪಿಯು ರಾಜ್ಯಪಾಲ ಆನಂದಿಬೆನ್ ಪಾಟೀಲ್ರಿಗೆ ಪತ್ರ ನೀಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿಯೊಂದಿಗೆ ನಿಕಟ ಪೈಪೋಟಿ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ವಿಧಾನಸಭೆಯಲ್ಲಿ ಕಾಂಗ್ರೆಸ್ಗೆ 114 ಸ್ಥಾನಗಳು ಮತ್ತು ಬಿಜೆಪಿಗೆ 109 ಶಾಸಕರು ಇದ್ದಾರೆ. ಬಿಎಸ್ಪಿಗೆ ಎರಡು ಸ್ಥಾನ ಮತ್ತು ಸಮಾಜವಾದಿ ಪಾರ್ಟಿಗೆ ಒಂದು ಸ್ಥಾನವಿದೆ. ನಾಲ್ವರು ಪಕ್ಷೇತರ ಸದಸ್ಯರೂ ಇದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಬಿಎಸ್ಪಿ ಮತ್ತು ಸಮಾಜವಾದಿ ಪಾರ್ಟಿ ಬೆಂಬಲ ನೀಡಿದೆ.