ಸನ್ಮಾರ್ಗ ವಾರ್ತೆ
ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಮುಂದಿಟ್ಟು S.I.O ದಕ್ಷಿಣ ಕನ್ನಡ ವಿದ್ಯಾರ್ಥಿ ಪ್ರಣಾಳಿಕೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಕೀಲ್ ಪದ್ಮರಾಜ್ ರನ್ನು ಭೇಟಿ ಮಾಡಿ ನೀಡಲಾಯಿತು.
ಉನ್ನತ ಶಿಕ್ಷಣ, ನಿರುದ್ಯೋಗ ಮತ್ತು ಸಮಾಜದಲ್ಲಿನ ಕೋಮು ದ್ವೇಷಕ್ಕೆ ಸಂಬಂಧಿಸಿದ ವಿಷಯಗಳಿಗೆ ವಿದ್ಯಾರ್ಥಿ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ.
ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅಭ್ಯರ್ಥಿ ಮತ್ತು ಸಂಘಟನೆಯು ಒಟ್ಟಾಗಿ ಶ್ರಮಿಸುವಂತೆ ಭೇಟಿಯಲ್ಲಿ ಗಮನ ಸೆಳೆಯಲಾಯಿತು. ಎಸ್ಐಒ ದ.ಕ ಜಿಲ್ಲಾ ಹೊಣೆಗಾರರು ಮತ್ತು ಎನ್ಎಸ್ಯುಐ ಜಿಲ್ಲಾ ಹೊಣೆಗಾರರು ಉಪಸ್ಥಿತರಿದ್ದರು.