ಕೇರಳದಲ್ಲಿ ಕೊನೆಗೂ ತಾವರೆ ಅರಳಲಿಲ್ಲ

0
508

ತಿರುವನಂತಪುರಂ,ಮೇ 24: ಕೇರಳದಲ್ಲಿ ಐದು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಶಾ ಹೇಳಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಹೆಚ್ಚು ಪಿಎಸ್ ಶ್ರೀಧರನ್ ಪಿಳ್ಳೆ ಹೆಚ್ಚು ಸ್ಥಾನ ಗೆದ್ದು ಇತಿಹಾಸ ನಿರ್ಮಿಸುತ್ತೇವೆ ಎಂದು ಹೇಳಿದ್ದರು. ಹೆಚ್ಚಲ್ಲದಿದ್ದರೆ ತಿರುವನಂತಪುರಂನಲ್ಲಿ ಗೆಲ್ಲುತ್ತೇವೆ. ಪತ್ತನಂತಿಟ್ಟ, ತೃಶೂರ್, ಪಾಲಕ್ಕಡಿನಲ್ಲಿ ಎರಡನೆ ಸ್ಥಾನಕ್ಕೆ ಬರುತ್ತೇವೆ ಎಂದು ಬಿಜೆಪಿಯಲ್ಲಿ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿಸಿದ್ದೊಂದೂ ನಡೆದಿಲ್ಲ. ಕಳೆದ ಚುನಾವಣೆಗಿಂತ ಹನ್ನೊಂದು ಲಕ್ಷ ಹೆಚ್ಚು ಮತ ಗಳಿಸಿದ್ದೇವೆಂದು ಬಿಜೆಪಿ ಹೇಳುತ್ತಿದೆ. ಪಾರ್ಟಿಯ ನೆಚ್ಚಿನ ತಿರುವನಂತಪುರಂನಲ್ಲಿ ಕಳೆದ ಬಾರಿ ಓ.ರಾಜಗೋಪಾಲನ್ ಸ್ಪರ್ಧಿಸಿ ಸೋತು ಹೋದರು. ಈ ಸಲ ಕುಮ್ಮನಂ ರಾಜಶೇಖರನ್ ಕೂಡ ಸೋತಿದ್ದಾರೆ. ಇಲ್ಲಿ ಬಿಜೆಪಿ ಎರಡನೆ ಸ್ಥಾನಕ್ಕೆ ಬಂದಿದೆ. ಕುಮ್ಮನಂ ಆರೆಸ್ಸೆಸ್ ಸೂಚಿಸಿದ ಅಭ್ಯರ್ಥಿಯಾದ್ದರಿಂದ ಅವರ ಸೋಲು ಬಿಜೆಪಿಯ ಸೋಲು ಕೂಡಾ ಆಗಿದೆ.