ಸನ್ಮಾರ್ಗ ವಾರ್ತೆ
ಪೆನ್ ಡ್ರೈ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ. ವಿಡಿಯೋ ಶೂಟ್ ಮಾಡಿಕೊಂಡದ್ದು ಪ್ರಜ್ವಲ್, ಮಹಿಳೆಯರನ್ನು ಅಮಾನವೀಯವಾಗಿ ಬಳಸಿಕೊಂಡದ್ದು ಪ್ರಜ್ವಲ್, ವಿಡಿಯೋ ಕದ್ದಿದ್ದು ಡ್ರೈವರ್ ಕಾರ್ತಿಕ್, ಪೆನ್ ಡ್ರೈವ್ ಪಡೆದುಕೊಂಡದ್ದು ದೇವರಾಜೇಗೌಡ, ವಿಡಿಯೋ ಇದೆ ಹೊರಗೆ ಬಿಡ್ತೀನಿ ಎಂದು ಹಲವಾರು ಬಾರಿ ಹೇಳಿದ್ದು ದೇವರಾಜೆ ಗೌಡ, ಅದಕ್ಕೆ ಕುಮ್ಮಕ್ಕು ಕೊಟ್ಟದ್ದು ಪ್ರೀತಂ ಗೌಡ ಹಾಗೂ ಬ್ರದರ್ ಸ್ವಾಮಿ. ಈ ಎಲ್ಲ ಘಟನೆಗಳಲ್ಲೂ ಬಿಜೆಪಿ ಜೆಡಿಎಸ್ ನವರೇ ಇದ್ದಾರೆ ಎಂದು ಕಾಂಗ್ರೆಸ್ ಉತ್ತರ ನೀಡಿದೆ.
ವಾಸ್ತವ ಹೀಗಿರುವಾಗ ಡಿಕೆ ಶಿವಕುಮಾರ್ ಅವರ ಹೆಸರು ಎಳೆದಿದ್ದು ಬಿಜೆಪಿಯ ಹೀನ ರಾಜಕಾರಣದ ಮುಂದುವರಿದ ಭಾಗವಷ್ಟೇ ಎಂದು ಕಾಂಗ್ರೆಸ್ ಟೀಕಿಸಿದೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಶಿವಕುಮಾರ್ ಮೇಲೆ ಆರೋಪವನ್ನು ಹೊರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮರು ಟ್ವಿಟ್ ಮಾಡಿದೆ.
ಇಡೀ ಪ್ರಕರಣ ಜೆಡಿಎಸ್ ಮತ್ತು ಪ್ರಜ್ವಲ್ ಸುತ್ತ ಸುತ್ತುತ್ತಿದ್ದು ಅದಕ್ಕೆ ಬೆಂಬಲವಾಗಿ ನಿಂತಿರುವುದು ಬಿಜೆಪಿಯ ದೇವರಾಜ ಗೌಡ ಆಗಿರುವಾಗ ಕಾಂಗ್ರೆಸ್ಸನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಅರ್ಥವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.