ಯೋಗಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ: ಕ್ಯಾಬಿನೆಟ್ ಸಚಿವ ಆಕ್ಷೇಪ

0
1047

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರದೊಂದಿಗೆ ಮೈತ್ರಿ ಹೊಂದಿದ ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿಯು ತನ್ನನ್ನು ಯೋಗಿ ಸರಕಾರ ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿಯ ಹೆಚ್ಚಿನ ಸಂಸದರೂ ಕೂಡ ಇದೇ ಮಾತನ್ನು ಮಾಧ್ಯಮಗಳ ಮುಂದೆ ತೆರೆದಿಡುತ್ತಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರು, ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ. ನಾವು ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ ಎಂದು SBSP ತಿಳಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರ ಅಮಿತ್ ಶಾ ರೊಂದಿಗೆ ವಿವಿಧ ಘಟನೆಗಳಿಗೆ ಸಂಬಂಧಿಸಿ ನಾವು ಸುದೀರ್ಘ ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ‌ ಎಪ್ರಿಲ್ 10 ರಂದು ಅಮಿತ್ ಶಾ ರವರು ಲಕ್ನೋ ಗೆ ಭೇಟಿ ನೀಡಲಿದ್ದು ಈ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಚಟುವಟಿಕೆಗಳನ್ನು ನಾವು ಎತ್ತ ಕೊಂಡೊಯ್ಯಬೇಕೆಂಬುದನ್ನು ನಿರ್ಧರಿಸಲಿದ್ದೇವೆ‌” ಎಂದು SBSP ಯ ನಾಯಕ ಹಾಗೂ ರಾಜ್ಯ ಕ್ಯಾಬಿನೆಟ್ ಸಚಿವರಾದ ಪ್ರಕಾಶ್ ರಾಜ್ಭರ್ ತಿಳಿಸಿದ್ದಾರೆ‌.
ಉತ್ತರ ಪ್ರದೇಶದ ಸಂಸದೀಯ ಅಧಿವೇಶನಗಳಲ್ಲಿ ಎಲ್ಲರ ಅಹವಾಲನ್ನು ಆಲಿಸಲಾಗುತ್ತದೆ. ಆದರೆ ನಿರ್ಣಯವನ್ನು ನಾಲ್ಕೈದು ಜನರು ಮಾತ್ರ ಕೈಗೊಳ್ಳುತ್ತಾರೆ‌. ನಾವು ನಿಮಗೆ ಮತ ಹಾಕಿದ್ದೇವೆ ಎಂದ ಮೇಲೆ ನಮಗೂ ನಿರ್ಣಯ ಕೈಗೊಳ್ಳುವಿಕೆಯಲ್ಲಿ ಅವಕಾಶವಿರಬೇಕು ಎಂದು ಪ್ರಕಾಶ್ ಅಸಮಾಧಾನವನ್ನು ಹೊರ ಹಾಕಿದ್ದಾರೆ.