ಕಾಂಗ್ರೆಸ್, ಬಿಜೆಪಿ ಸರಕಾರಗಳು ಮುಸ್ಲಿಮರೊಡನೆ ಕ್ರೂರವಾಗಿ ವರ್ತಿಸುತ್ತಿದೆ- ಮಾಯಾವತಿ

0
597

ಹೊಸದಿಲ್ಲಿ: ಕಾಂಗ್ರೆಸ್, ಬಿಜೆಪಿ ಸರಕಾರಗಳು ಭಾರತದ ಜನರ ವಿರುದ್ಧ ಭಯೋತ್ಪಾದನೆಯನ್ನು ಛೂ ಬಿಡುತ್ತಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹೇಳಿದರು. ದನವನ್ನು ಕೊಂದ ಶಂಕೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸರಕಾರಗಳು ನಿಷ್ಕಳಂಕರಾದ ಮುಸ್ಲಿಮರೊಂದಿಗೆ ಕ್ರೂರವಾಗಿ ವರ್ತಿಸುತ್ತಿವೆ. ಎರಡು ಪಾರ್ಟಿಗಳಲ್ಲಿ ಪರಸ್ಪರ ಯಾವುದಾದರೂ ವ್ಯತ್ಯಾಸ ಇದೆಯೇ ಎಂದು ಜನರು ತೀರ್ಮಾನಿಸಬೇಕೆಂದು ಮಾಯಾವತಿ ಹೇಳಿದರು.

ಮಧ್ಯಪ್ರದೇಶದಲ್ಲಿ ದನವನ್ನು ಆಕ್ರಮಿಸಿದವರ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾನೂನಿನ ಅಡಿಯಲ್ಲಿ ಮಧ್ಯಪ್ರದೇಶದ ಕಮಲನಾಥ್ ಸರಕಾರ ಕೇಸು ದಾಖಲಿಸಿದ್ದನ್ನು ತೋರಿಸಿ ಮಾಯಾವತಿ ಕಾಂಗ್ರೆಸ್ಸನ್ನು ಟೀಕಿಸಿದ್ದಾರೆ. ಈಗಿನ ಕಾಂಗ್ರೆಸ್ ಸರಕಾರ ಕೂಡ ಹಿಂದಿನ ಬಿಜೆಪಿ ಸರಕಾರದ ರೀತಿಯಲ್ಲೇ ಮುಸ್ಲಿಮರ ವಿರುದ್ಧ ನಿಷ್ಠುರವಾಗಿ ವರ್ತಿಸುತ್ತಿದೆ ಎಂದು ಮಾಯಾವತಿ ಆರೋಪಿಸಿದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ 14 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಅಪರಾಧ ಹೊರಿಸಿ ಕೇಸು ದಾಖಲಿಸಿದ ಯೋಗಿ ಆದಿತ್ಯನಾಥ್ ಸರಕಾರವನ್ನು ಕೂಡ ಮಾಯಾವತಿ ಕಟುವಾಗಿ ಟೀಕಿಸಿದ್ದಾರೆ.