ಪ್ರಜ್ಞಾ ಸಿಂಗ್‍ಗೆ ಬಿಜೆಪಿಯ ಟಿಕೆಟು ನೀಡಿಕೆ; ಹಿಂದೂಗಳನ್ನು ಭಯೋತ್ಪಾದಕರನ್ನಾಗಿಸುವವರಿಗೆ ಉತ್ತರ- ಪ್ರಧಾನಿ ಮೋದಿ

0
1747

ಹೊಸದಿಲ್ಲಿ,ಎ. 20: ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‍ರಿಗೆ ಟಿಕೆಟು ನೀಡಿರುವುದು ಹಿಂದೂಗಳನ್ನು ಭಯೋತ್ಪಾದಕರನ್ನಾಗಿಸುವವರಿಗೆ ನೀಡುವ ಉತ್ತರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಲವರು ಒಂದು ಧರ್ಮ, ಸಂಸ್ಕೃತಿಯನ್ನು ಸಂಪೂರ್ಣ ಭಯೋತ್ಪಾದಕರನ್ನಾಗಿಸಿ ಚಿತ್ರೀಕರಿಸುತ್ತಿದ್ದಾರೆ ಎಂದು ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದರು.

ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತವಲ್ಲ. ಅದೊಂದು ಸಹಜ ಪ್ರಕ್ರಿಯೆಯಾಗಿ ನಡೆಯುತ್ತಿದೆ ಎಂದು ಮೋದಿ ಹೇಳಿದರು. ದಾಳಿಯಿಂದ ಭ್ರಷ್ಟಾಚಾರ ನಡೆಸಿದ್ದಕ್ಕೆ ಸಾಕ್ಷ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಶಿಶು ಕಲ್ಯಾಣ, ಮಾತೃ ಕಲ್ಯಾಣಗಳ ಹಣವನ್ನು ಕೆಲವರು ದುರುಪಯೋಗಿಸಿದ್ದು ಕಂಡು ಬಂದಿದೆ ಎಂದು ಮೋದಿ ಹೇಳಿದರು.