ತಿಹಾರ್ ಜೈಲಿನಲ್ಲಿ ಅಧಿಕಾರಿಗಳಿಂದ ದೌರ್ಜನ್ಯ: ಕೈದಿಯ ಬೆನ್ನಿಗೆ ಕಾದ ಲೋಹದಿಂದ ‘ಓಂ’ ಅಚ್ಚು!

0
1763

ಹೊಸದಿಲ್ಲಿ,ಎ.20: ತಿಹಾರ್ ಜೈಲಿನ ಅಧಿಕಾರಿಗಳು ಕೈದಿಯ ದೇಹದಲ್ಲಿ ಕಾದ ಲೋಹದಿಂದ ಓಂ ಅಚ್ಚು ಒತ್ತಿದ್ದಾರೆ. ಜೈಲಿನ ಅಧಿಕಾರಿಗಳು ಮಾರಣಾಂತಿಕವಾಗಿ ಹೊಡೆದು, ಊಟ ಕೊಡದೆ ನಂತರ ಕಾದಲೋಹದಿಂದ ಬೆನ್ನಿಗೆ ಓಂ ಅಚ್ಚು ಹಾಕಿದ್ದಾರೆ ಎಂದು ಆಯುಧ ಕಳ್ಳಸಾಗಾಟದಲ್ಲಿ ಜೈಲು ಪಾಲಾಗಿರುವ ನಬೀರ್ ಎಂಬಾತ ಆರೋಪಿಸಿದ್ದಾನೆ.

ಶುಕ್ರವಾರ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರು ಪಡಿಸಿದಾಗ ನಬೀರ್ ಶರ್ಟ್ ತೆಗೆದು ಓಂ ಮುದ್ರೆ ಹಾಕಿರುವುದನ್ನು ತೋರಿಸಿದ್ದಾನೆ. ನಬೀರ್ ಆರೊಪವನ್ನು ತನಿಖೆಮಾಡಲು ತಿಹಾರ್ ಜೈಲು ಉನ್ನತ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಕೋರ್ಟು ಆದೇಶಿಸಿದ್ದು 24 ಗಂಟೆಗಳೊಳಗೆ ವರದಿ ನೀಡಬೇಕೆಂದು ಸೂಚಿಸಿದ್ದಾರೆ. ಗಂಭೀರ ಆರೋಪ ಇದು ತುರ್ತು ಕ್ರಮ ಜರಗಿಸುವ ಆವಶ್ಯಕತೆ ಇದೆ ಎಂದು ಕೋರ್ಟು ನಿರೀಕ್ಷಿಸಿದೆ.