ಮನೋಹರ್ ಪಾರಿಕ್ಕರ್ ಮಕ್ಕಳು ರಾಜಕೀಯಕ್ಕೆ ?

0
474

ಪಣಜಿ,ಮಾ.31: ಇತ್ತೀಚೆಗೆ ನಿಧನರಾದ ಗೋವ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಮಕ್ಕಳು ರಾಜಕೀಯ ಪ್ರವೇಶಿಸಲಿದ್ದಾರೆಂದು ಸೂಚನೆ ಲಭಿಸಿದೆ. ದೇಶಕ್ಕೆ, ರಾಜ್ಯಕ್ಕೆ ತಮ್ಮ ತಂದೆ ನೀಡಿದ ಆತ್ಮಸಮರ್ಪಣೆಯ ಪರಂಪರೆಯನ್ನು ಮುಂದುವರಿಸಲು ಬಯಸುತ್ತೇವೆ ಎಂದು ಪಾರಿಕ್ಕರ್ ಮಕ್ಕಳು ಹೇಳಿಕೆ ನೀಡಿದ್ದಾರೆ.

ಪಾನ್‍ಕ್ರಿಯಾಸಿಸ್ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯುತ್ತಿದ್ದ ಪಾರಿಕ್ಕರ್ ಮಾರ್ಚ್ 17ರಂದು ನಿಧನರಾಗಿದ್ದರು. ಅವರ ಮಕ್ಕಳಾದ ಉತ್ಪಲ್, ಅಭಿಜಾತ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಅಥವಾ ಪಾರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂದು ವರದಿಯಾಗಿವೆ.

ಮಹಾತ್ಮರ ಕುರಿತ ನೆನಪು, ಉತ್ತಮ ಉದಾಹರಣೆಗಳ ಮುಂದುವರಿಕೆ ಹೀರೊಗಳ ಪರಂಪರೆಯೆಂದು ಬ್ರಿಟನ್‍ನ ಮಾಜಿ ಪ್ರಧಾನಿ ಬೆಂಜಮಿನ್ ದಿಸ್ರೊಲಿ ನೀಡಿದ ಹೇಳಿಕೆಯನ್ನು ಉದ್ಧರಿಸಿದ ಪಾರಿಕ್ಕರ್ ಪುತ್ರರು “ದೇಶ,ರಾಜ್ಯದ ಸೇವೆಯನ್ನು ಮುಂದುವರಿಸುವ ಮೂಲಕ ನಾವು ಪಾರಿಕ್ಕರ್‍ರನ್ನು ಗೌರವಿಸಲಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.