ಉತ್ತರಪ್ರದೇಶ: ಗಂಗಾ ರ‌್ಯಾಲಿಯ ಮೂಲಕ ಮೋದಿಯ ಲಂಕೆಗೆ ಪ್ರಿಯಾಂಕಾ ಲಗ್ಗೆ

0
973

ಲಕ್ನೊ, ಮಾ.18: ಗಂಗಾ ನದಿಯಲ್ಲಿ ಬೋಟ್ ರ‌್ಯಾಲಿಯ ಮೂಲಕ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಚಾಲನೆ ನೀಡಿದ್ದಾರೆ. ಗಂಗಾದ ಮನಿಯ್ಯ ಘಾಟ್‍ನಿಂದ ಅಸ್ಸಿಘಾಟ್‍ವರೆಗೆ ಪ್ರಿಯಾಂಕಾ ಮತ್ತು ಕಾರ್ಯಕರ್ತರು ಬೋಟ್ ರ‌್ಯಾಲಿ ನಡೆಸಿದರು.

ವಾರಣಾಸಿಯ ಬಡೆ ಹನುಮಾನ್ ದೇಗುಲದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಪ್ರಿಯಾಂಕಾ ಪ್ರಚಾರ ಶುರು ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅವರು ವಿಶೇಷ ಪ್ರಾರ್ಥನೆ ನಡೆಸಿದರು. ಮೋದಿಯ ಲಂಕೆಗೆ ಪ್ರಿಯಾಂಕಾ ಲಗ್ಗೆ ಇಡಲಿದ್ದಾರೆ ಎಂಬ ಘೋಷಣೆಯು ಕಾರ್ಯಕರ್ತರು ಕೂಗಿ ಅವರನ್ನು ಸ್ವಾಗತಿಸಿದರು.ಕಳೆದದಿವಸ ಲಕ್ನೊದಲ್ಲಿ ಪ್ರಿಯಾಂಕಾ ಗಾಂಧಿ ಮದ್ರಸಾ ಅಧ್ಯಾಪಕರು ಮತ್ತು ಅಂಗನವಾಡಿ ಉದ್ಯೋಗಿಗಳನ್ನು ಭೇಟಿಯಾಗಿದ್ದಾರೆ.