ತನಿಖೆ ಮಾಡದೆ ಭಾರತ ಪಾಕಿಸ್ತಾನದ ವಿರುದ್ಧ ಆರೋಪ ಹೊರಿಸುತ್ತಿದೆ: ಪಾಕ್ ವಿದೇಶಾಂಗ ಸಚಿವ ಖುರೇಶಿ

0
1315

ಕರಾಚಿ: ಅಕ್ರಮ ಪಾಕ್ ಸರಕಾರದ ನೀತಿಯಲ್ಲ ಎಂದು ಪಾಕಿಸ್ತಾನದ ವಿದೇಶ ಸಚಿವ ಮುಹಮ್ಮದ್ ಖುರೇಶಿ ಹೇಳಿದ್ದಾರೆ.
ಪೂಲ್ವಾಮ ಭಯೋತ್ಪಾದನ ದಾಳಿಯ ಕುರಿತು ಅವರು ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಅವರು ಹೀಗೆ ಹೇಳಿದ್ದಾರೆ. ಪೂಲ್ವಾಮದಲ್ಲಿ ಭಯೋತ್ಪಾದನಾ ದಾಳಿ ದುಃಖವುಂಟು ಮಾಡಿದೆ. ತನಿಖೆ ಮಾಡದೆ ಭಾರತ ಪಾಕಿಸ್ತಾನದ ವಿರುದ್ಧ ಆರೋಪ ಹೊರಿಸುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು. ಪಾಕಿಸ್ತಾನದ ವಿರುದ್ಧ ಸಾಕ್ಷ್ಯವಿದ್ದರೆ ಅದನ್ನು ನೀಡಲು ಭಾರತ ಸಿದ್ಧವಾಗಬೇಕು ಎಂದು ಜಿಯೊ ನ್ಯೂಸ್‍ಗೆ ತಿಳಿಸಿದ್ದಾರೆ.

ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನವನ್ನು ಆರೋಪಿಸಿ ಭಾರತ ರಂಗಪ್ರವೇಶಿಸಿದೆ. ಪಾಕಿಸ್ತಾನವನ್ನು ಒಂಟಿಗೊಳಿಸುವ ಕ್ರಮಕ್ಕೆ ಮುಂದಾಗುವುದಾಗಿ ಭಾರತ ತಿಳಿಸಿತು. ಪಾಕಿಸ್ತಾನಕ್ಕೆ ನೀಡಿದ್ದ ಸೌಹಾರ್ದ ದೇಶ ಸ್ಥಾನಮಾನವನ್ನು ಹಿಂಪಡೆದಿದೆ. ಈ ಹಿಂದೆ ಅಮರಿಕದಂತಹ ದೇಶಗಳು ಪಾಕಿಸ್ತಾನದ ವಿರುದ್ಧ ರಂಗಪ್ರವೇಶಿಸಿತ್ತು. ಭಯೋತ್ಪಾದನೆಗೆ ಸಂಬಂಧಿಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಬೇಡಿಕೆಗಳು ಕೂಡ ಎದ್ದಿದ್ದು ಇದರ ಬೆನ್ನಿಗೆ ಪಾಕಿಸ್ತಾನ ತನ್ನ ನಿಲುವನ್ನು ವ್ಯಕ್ತಪಡಿಸಿದೆ.