ಸಿಪಿಎಂ ಕೋಮು ಧ್ರುವೀಕರಣ ಮಾಡುತ್ತಿದೆ: ಮುನವ್ವರಲಿ ಶಿಹಾಬ್ ತಂಙಳ್

0
356

ಸನ್ಮಾರ್ಗ ವಾರ್ತೆ

ವಡಗರ: ಜಾತ್ಯತೀತ ಶಕ್ತಿಗಳು ಒಂದಾಗಿರಬೇಕಾದ ಕಾಲದಲ್ಲಿ ಕೋಮುಧ್ರುವೀಕರಣ ಮಾಡಿ ಸೌಹಾರ್ದವನ್ನು ನಾಶಪಡಿಸುವ ಸಿಪಿಎಂ ಪ್ರಯತ್ನ ನಾಡಿಗೇ ಅಪಾಯಕಾರಿ ಎಂದು ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಹೇಳಿದರು.

ನಾಡಿನ ಸೌಹಾರ್ದ ನಾಶಮಾಡಿ ಮತಗಳಿಸಿ ಜಯಿಸುವುದು ಸಿಪಿಎಂನ ವ್ಯಾಮೋಹವಾಗಿದೆ ಎಂದು ಅವರು ಹೇಳಿದರು. ಕೈನಾಟ್ಟಿ ಎಂಬಲ್ಲಿ ಮುಸ್ಲಿಂ ಲೀಗ್ ಕಮಿಟಿ ನಿರ್ಮಿಸಿದ ಬೈತುರ್ರಹ್ಮಾ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈನಾಟಿ ಮಂಡಲ ಕಾರ್ಯದರ್ಶಿ ಶಂಸುದ್ದೀನ್ ಕೈನಾಟ್ಟಿ ವಹಿಸಿದ್ದರು. ಬೈತುರ್ರಹ್ಮಾದ ಕೀಲಿಕೈಯನ್ನು ಮುನವ್ವರಲಿ ತಂಙಳ್ ಕಾಳಂಕುಳಂ ಹಾಷಿಂರಿಗೆ ನೀಡಿದರು. ಎಂಸಿ ಇಬ್ರಾಹೀಂ ಮುಖ್ಯ ಭಾಷಣ ನೀಡಿದರು. ಉಪಾಧ್ಯಕ್ಷ ಎಂಪಿ ಅಬ್ದುಲ್ಲ ಹಾಜಿ ಮುಂತಾದವರು ಉಪಸ್ಥಿತರಿದ್ದರು.