ಸನ್ಮಾರ್ಗ ವಾರ್ತೆ
ರಾಂಚಿ: ಕಾಂಗ್ರೆಸ್ ಸಖ್ಯ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುರಿಗೆ ಬೆಂಬಲ ಘೋಷಿಸಿದೆ. ಜೆಎಂಎಂ ಸಂಸದರು, ಶಾಸಕರು ಮುರ್ಮುರಿಗೆ ಮತ ಹಾಕುವರು ಎಂದು ಅಧ್ಯಕ್ಷ ಶಿಬು ಸೊರೆನ್ ಹೇಳಿದ್ದಾರೆ.
ಜೆಎಂಎಂ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹರನ್ನು ಕೈಹಿಡಿಯುತ್ತಿಲ್ಲ. ಬದಲಾಗಿ ಬಿಜೆಪಿಯ ಎನ್ಡಿಎ ಅಭ್ಯರ್ಥಿ ಮಾಜಿ ಬಿಜೆಪಿ ಆದಿವಾಸಿ ನಾಯಕಿ ಮುರ್ಮುರನ್ನು ಬೆಂಬಲಿಸುತ್ತಿದ್ದು, ಇದು ಯುಪಿಎಗೆ ದೊಡ್ಡ ಹಿನ್ನಡೆಯಾಗಿದೆ.