ಉಡುಪಿ: ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಉಡುಪಿಯ ಹರ್ಷಿತ್ ಮಾತು

0
258

ಸನ್ಮಾರ್ಗ ವಾರ್ತೆ

ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೇ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಮೂಲತಃ ತೀರ್ಥಹಳ್ಳಿಯ ಹರ್ಷಿತ್ ಹಾಸ್ಟೆಲ್‌ನಲ್ಲಿದ್ದು ಓದಿಕೊಳ್ಳುತ್ತಿದ್ದಾರೆ. ನಾನು ಒಳ್ಳೆಯ ಅಂಕ ನಿರೀಕ್ಷೆ ಮಾಡಿದ್ದೆ. ಆದರೆ ರ‍್ಯಾಂಕ್ ನಿರೀಕ್ಷಸಿರಲಿಲ್ಲ. ಪ್ರಿನ್ಸಿಪಾಲ್ ಫೋನ್ ಮಾಡಿ ರ‍್ಯಾಂಕ್ ಬಂದ ವಿಚಾರ ತಿಳಿಸಿದರು. ಆಗ ನನಗೆ ಎರಡನೇ ರ‍್ಯಾಂಕ್ ಅಂತ ಗೊತ್ತಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಈ ಸಾಧನೆಗೆ ಶಿಕ್ಷಕರು ಮತ್ತು ಪೇರೆಂಟ್ಸ್, ಸ್ನೇಹಿತರು ಕಾರಣ. ಪ್ರತಿ ದಿನ ತರಗತಿಯಲ್ಲಿ ಪಾಠವನ್ನು ಕ್ಲಿಯರ್ ಆಗಿ ಕೇಳುತ್ತಿದ್ದೆ. ಹೇಳಿಕೊಟ್ಟ ಕಾನ್ಸೆಪ್ಟ್ ಅರ್ಥ ಮಾಡಿಕೊಳ್ಳುತ್ತಿದ್ದೆ. ಅದೇ ದಿನ ಹಾಸ್ಟೆಲ್‌ಗೆ ಹೋಗಿ ರಿವಿಜನ್ ಮಾಡುತ್ತಿದ್ದೆ.

ಮುಂದೆ ನಾನು ಸಿಎ ಮಾಡಬೇಕೆಂದಿದ್ದೇನೆ. ಇದೇ ಕಾಲೇಜಿನಲ್ಲಿ ಕೋಚಿಂಗ್ ಪಡೆಯುತ್ತಿದ್ದೇನೆ. ಫೈಲ್ ಆದವರು ಜೀವನ ಮುಗಿಯಿತು ಎಂದು ಭಾವಿಸೋದು ಬೇಡ ಎಂಬುದು ಹರ್ಷಿತ್‌ನ ಸಲಹೆ.