ಕಾಶ್ಮೀರಿಗಳ ಸಂಕಷ್ಟ ವರದಿ ಮಾಡಿದ ಅಹ್ಮದ್ ಖಾನ್‍ಗೆ ಪುರಸ್ಕಾರ

0
553

ಸನ್ಮಾರ್ಗ ವಾರ್ತೆ

ಹಾಕಾಂಗ್, ಫೆ. 21: ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಅಳವಡಿಸಿದ ನಿಯಂತ್ರಣಗಳು ಜಮ್ಮುಕಾಶ್ಮೀರ ಜನತೆಯ ಉಸಿರುಗಟ್ಟಿಸಿದ್ದು ಅವರ ಜೀವನವನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದನ್ನು ವರದಿ ಮಾಡಿದ ಫ್ರಿಲ್ಯಾನ್ಸ್ ವರದಿಗಾರ ಅಹ್ಮದ್‍ಖಾನ್ ಕಳೆದ ವರ್ಷದ ಎಎಎಫ್‍ವಿ ಕೈಟ್ ವೆಬ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಏಷ್ಯದಲ್ಲಿ ಸಂಕಷ್ಟ ಮತ್ತು ಅಪಾಯ ಸಾಧ್ಯತೆಯಿರುವ ಪರಿಸ್ಥಿತಿಗಳಲ್ಲಿ ಸ್ಥಳೀಯರು ತಯಾರಿಸುವ ವರದಿಯನ್ನು ಎಎಫ್‍ವಿಯು ತನ್ನ ಮಾಜಿ ವರದಿಗಾರನ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಎರಡೂಕಾಲು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವಾಗಿದ್ದು ಎಲ್ಲ ಪತ್ರಕರ್ತರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿರುವುದಾಗಿ ಖಾನ್ ಹೇಳಿದರು.