‘ಶಿಕ್ಷಕರು-ರಾಷ್ಟ್ರ ನಿರ್ಮಾಣಕ್ಕಾಗಿ’ ಐಟಾದ ಆನ್ ಲೈನ್ ಅಭಿಯಾನ ಇಂದು ಸಮಾರೋಪ

0
449

ಸನ್ಮಾರ್ಗ ವಾರ್ತೆ

ಬೆಂಗಳೂರು: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೆಶನ್ ಐಟಾ ಕರ್ನಾಟಕವು ಜು.10ರಿಂದ ಆಯೋಜಿಸಿದ್ದ ’ಶಿಕ್ಷಕರು-ರಾಷ್ಟ್ರ ನಿರ್ಮಾಣಕ್ಕಾಗಿ’ ಆನ್ ಲೈನ್ ಅಭಿಯಾನವು ಜು.17ರಂದು ರಾತ್ರಿ 8ಗಂಟೆಗೆ ಝೂಮ್ ಮೀಟ್ ಮೂಲಕ ಸಮಾರೋಪಗೊಳ್ಳಲಿದೆ ಎಂದು ಅಭಿಯಾನದ ಸಂಚಾಲಕ ಖಾಲಿದ್ ಪರ್ವಾಝ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾರೋಪ ಸಮಾರಂಭವನ್ನು ರಾಜ್ಯದ ಮಾಜಿ ಶಿಕ್ಷಣ ಸಚಿವ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವಿರ್‍ ಅಜೀಝ್ ಸೇಟ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಎಸಿಬಿ(ಭ್ರಷ್ಟಾಚಾರ ನಿಗ್ರಹದಳ) ಎಸ್.ಪಿ ಅಬ್ದುಲ್ ಅಹದ್ ಐಪಿಎಸ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭೋಲಿಂಗನಗೌಡ ಪಾಟೀಲ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಝಿ ತಾಲೀಮಿ ಬೋರ್ಡ್ ದೆಹಲಿ ಇದರ ಅಧ್ಯಕ್ಷ ಮುಜ್ತಬಾ ಫಾರೂಖ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಐಟಾ ರಾಜ್ಯಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಕಾರ್ಯದರ್ಶಿ ಯಾಸೀನ್ ಭಿಕ್ಬಾ ಉಪಸ್ಥಿತರಿರುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.