ಶ್ರೀನಗರ,ಮೇ 15: ಶ್ರೀನಗರ ಹಳೆಯ ನಗರದಲ್ಲಿ ಹಸಿದು ಬಳಲಿ ಆಹಾರಕ್ಕಾಗಿ ಕೈ ಚಾಚಿದ ಭಿನ್ನಸಾಮಥ್ರ್ಯದ ಬಾಲಕನಿಗೆ ಸಿಆರ್ಪಿಎಫ್ ಜವಾನ ಕೈತುತ್ತು ನೀಡಿ ಹಸಿವು ನಿವಾರಿಸಿದ ಹೃದಯ ಸ್ಪರ್ಶಿ ಘಟನೆ ವೈರಲ್ ಆಗಿದೆ. 49ನೆ ಬೆಟಾಲಿಯನ್ನ ಹವಾಲ್ದಾರ್ ಚಾಲಕ ಇಕ್ಬಾಲ್ ಸಿಂಗ್ ಅನ್ನಕ್ಕಾಗಿ ಕೈ ಚಾಚಿದ ಬಾಲಕನನ್ನು ನೋಡಿದರು. ಆಹಾರ ಕೊಡಲು ಹತ್ತಿರ ಹೋದರು. ಆದರೆ ಬಾಲಕನಿಗೆ ಅದನ್ನು ತೆಗೆದು ಕೊಳ್ಳುವ ಶಕ್ತಿಯಿಲ್ಲ ಎಂದು ತಿಳಿದೊಡನೆ ಅವರ ಬಾಲಕನಿಗೆ ಕೈತುತ್ತು ತಿನ್ನಿಸಿ ನೀರು ಕುಡಿಸಿದ್ದಾರೆ.
ಯಾರೋ ಈ ಮಾನವೀಯ ದೃಶ್ಯವನ್ನು ಚಿತ್ರಿಸಿ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದರು. ನಂತರ ಅದು ವೈರಲ್ ಆಗಿ ಸೈನಿಕನ ಮಾನವೀಯತೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಇಕ್ಬಾಲ್ ಸಿಂಗ್ರನ್ನು ಸಿಆರ್ಪಿಎಫ್ ನಿರ್ದೇಶಕರು ಸನ್ಮಾನಿಸಲು ನಿರ್ಧರಿಸಿದ್ದಾರೆ. ಫೂಲ್ವಾಮ ದಾಳಿಯ ವೇಳೆ ಸೇನೆಯ ಒಂದು ಟ್ರಕ್ನಲ್ಲಿ ಇವರು ಚಾಲಕರಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮೈಮರೆತು ಸೇವೆ ಸಲ್ಲಿಸಿದ್ದರು. ಇದು ನಂತರ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿತ್ತು.
"Humanity is the mother of all religions"
HC Driver Iqbal Singh of 49 Bn Srinagar Sector CRPF deployed on LO duty feeds a paralysed Kashmiri kid in Nawakadal area of Srinagar. In the end, asks him "Do you need water?"
"Valour and compassion are two sides of the same coin" pic.twitter.com/zYQ60ZPYjJ
— Srinagar Sector CRPF 🇮🇳 (@crpf_srinagar) May 14, 2019