ಸಿಂಘು ಗಡಿಯಲ್ಲಿ ದುಷ್ಕರ್ಮಿಗಳಿಂದ ಗುಂಡು ಹಾರಾಟ

0
491

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತರ ಹೋರಾಟ ನಡೆಯುತ್ತಿರುವ ದಿಲ್ಲಿ-ಹರಿಯಾಣದ ಸಿಂಘು ಗಡಿಯಲ್ಲಿ ಅಜ್ಞಾತರಿಂದ ಗುಂಡು ಹಾರಾಟ ನಡೆದಿದೆ ಎಂಬುದಾಗಿ ರೈತರು ಹೇಳಿದ್ದಾರೆ. ರವಿವಾರ ರಾತ್ರೆ ಘಟನೆ ನಡೆದಿದ್ದು ಕಾರಿನಲ್ಲಿ ಬಂದ ತಂಡವೊಂದು ಆಕಾಶಕ್ಕೆ ಗುಂಡು ಹಾರಸಿದೆ. ಪ್ರತಿಭಟನಾ ಸ್ಥಳದ ಸಮೀಪದಲ್ಲಿ ಆಹಾರ ವಿತರಣೆ ನಡೆಯುತ್ತಿತ್ತು. ದುಷ್ಕರ್ಮಿಗಳು ಇದೇ ವೇಳೆ ಸ್ಥಳಕ್ಕೆ ಬಂದು ಗುಂಡು ಹಾರಿಸಿದ್ದು ಪಂಜಾಬ್ ನೋಂದಣಿಯ ಕಾರಿನಲ್ಲಿ ಅವರು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡು ಹಾರಾಟ ಘಟನೆ ನಡೆದ ನಂತರ ಸ್ಥಳಕ್ಕೆ ಬಂದ ಹರಿಯಾಣ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಸಂಬಂಧಿಸಿ ಮಹಿಳಾ ರೈತರು ಟ್ರಾಕ್ಟರಿನಲ್ಲಿ ದಿಲ್ಲಿಗೆ ಬರುವ ವೇಳೆ ಘಟನೆ ನಡೆದಿದೆ. ಇಂದು ಮಹಿಳೆಯರಿಂದ ಟ್ರಾಕ್ಟರ್ ಮಾರ್ಚ್ ನಡೆಯಲಿದೆ‌.